ಹತ್ತು ಅಕಾಡೆಮಿಗಳು ಒಟ್ಟುಗೂಡಿ ಕಾಸರಗೋಡಿನಿಂದ ಕಾರವಾರದವರೆಗೆ...
ಮಂಗಳೂರು : ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು ಕಾದಂಬರಿಯಂತೆ, ರಾಜ್ಯದ ಹತ್ತು ಅಕಾಡೆಮಿಗಳು ಒಟ್ಟುಗೂಡಿ ಕಾಸರಗೋಡಿನಿಂದ ಕಾರವಾರದವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಿವರಾಮ ಕಾರಂತರ ಜನ್ಮ ಶತಾಬ್ಧಿ ಅನ್ವಯ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗೆ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಆರ್.ನಾಗೇಶ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಇದೇ
ಮೊದಲ
ಬಾರಿಗೆ
ಹತ್ತು
ಅಕಾಡೆಮಿಗಳು
ಒಟ್ಟಾಗಿ
ಕಾರ್ಯಕ್ರಮ
ಹಮ್ಮಿಕೊಳ್ಳುತ್ತಿವೆ.
ಸರ್ಕಾರ
ಅಕಾಡೆಮಿಗಳಿಗೆ
ನೀಡಿರುವ
ಅನುದಾನವನ್ನು
ಹೆಚ್ಚಿಸಿರುವುದರಿಂದ
ಹೆಚ್ಚಿನ
ಸಂಖ್ಯೆಯಲ್ಲಿ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲು
ಸಾಧ್ಯವಾಗಿದೆ.
ಹತ್ತೂ
ಅಕಾಡೆಮಿಗಳು
ಒಂದೇ
ವೇದಿಕೆಯನ್ನು
ಹಂಚಿಕೊಳ್ಳಲು
ಕಷ್ಟವಾದಲ್ಲಿ
,
ಕನಿಷ್ಠ
ನಾಲ್ಕು
ಅಕಾಡೆಮಿಗಳು
ಒಟ್ಟಾಗಿ
ಕಾರ್ಯಕ್ರಮಗಳನ್ನು
ರೂಪಿಸಲಿವೆ
ಎಂದು
ನಾಗೇಶ್
ಹೇಳಿದರು.
(ಇನ್ಫೋ
ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...