ಹಿಂದೂಗಳ ಶಾಪದಿಂದ ಬಿಜೆಪಿಗೆ ಹಿನ್ನಡೆ, ಕಾಂಗ್ರೆಸ್ಗೆ ಮುನ್ನಡೆ- ಬಾಳಾ ಠಾಕ್ರೆ
ಶಿರಡಿ : ಹಿಂದುತ್ವ ಕುರಿತಾದ ತನ್ನ ನಿಲುವನ್ನು ಬದಲಿಸಿಕೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷ ತನ್ನ ಗೋರಿಯನ್ನು ತಾನೇ ತೋಡಿಕೊಂಡಿದೆ ಎಂದು ಶಿವಸೇನೆಯ ಸರ್ವೋಚ್ಛ ನಾಯಕ ಬಾಳಾ ಠಾಕ್ರೆ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಉತ್ತರಾಂಚಲ, ಪಂಜಾಬ್ ವಿಧಾನಸಭೆ ಹಾಗೂ ದೆಹಲಿಯ ಮುನಿಸಿಪಲ್ ಚುನಾವಣೆಗಳ ಸೋಲಿಗೂ ಬಿಜೆಪಿಯ ಹಿಂದುತ್ವ ಕುರಿತಾದ ನಿಲುವೇ ಕಾರಣವಾಗಿದೆ. ಬಿಜೆಪಿ ವಿರುದ್ಧ ಹಿಂದೂಗಳು ತಿರುಗಿ ಬಿದ್ದಿದ್ದು , ಹಿಂದೂಗಳ ಶಾಪದಿಂದಾಗಿ ಬಿಜೆಪಿ ಸೋಲನುಭವಿಸಿದೆ ಎಂದು ಠಾಕ್ರೆ ಹೇಳಿದ್ದಾರೆ. ಅವರು ಶಿರಡಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಶಿವಸೇನೆ ತನ್ನ ಹಿಂದೂತ್ವ ಪರ ವಾದದಿಂದ ಯಾವತ್ತಿಗೂ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷ ತನ್ನ ನೀತಿಗಳಿಂದ ಯಾವ ಕಾರಣಕ್ಕೂ ವಿಮುಖವಾಗುವುದಿಲ್ಲ ಎಂದರು. ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದು ಕಾಂಗ್ರೆಸ್ ಬಲವಾಗುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಬಂಗಾರು
ಲಕ್ಷ್ಮಣ್,
ಅಣ್ಣಾ
ಡಂಗೆ
ಮುಂತಾದ
ನಾಯಕರು
ಬಿಜೆಪಿ
ನಾಯಕರ
ವಿರುದ್ಧ
ಬಹಿರಂಗವಾಗಿ
ನೀಡುತ್ತಿರುವ
ಹೇಳಿಕೆಗಳ
ಕುರಿತು
ಅಸಮಾಧಾನ
ಸೂಚಿಸಿದ
ಠಾಕ್ರೆ-
ಈ
ನೆಲದ
ಕಾನೂನನ್ನು
ಪಾಲಿಸುವಂತೆ
ಮುಸ್ಲಿಮರಿಗೆ
ಹೇಳುವಂಥ
ನಾಯಕನೊಬ್ಬ
ನಮಗೆ
ಬೇಕಾಗಿದ್ದಾನೆ
ಎಂದು
ಯಾರ
ಹೆಸರನ್ನೂ
ಪ್ರಸ್ತಾಪಿಸದೆ
ಹೇಳಿದರು.
ಬ್ರಿಟನ್ನಲ್ಲಿ
ಮುಸ್ಲಿಮರ
ಪ್ರತಿಭಟನೆಯನ್ನು
ಹತ್ತಿಕ್ಕಿದ
ಅಲ್ಲಿನ
ಪ್ರಧಾನಿ
ಮಾರ್ಗರೆಟ್
ಥ್ಯಾಚರ್
ಅಂಥವರ
ನಾಯಕತ್ವ
ಭಾರತಕ್ಕೆ
ಅಗತ್ಯವಾಗಿದೆ
ಎಂದು
ಠಾಕ್ರೆ
ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...