ಸ್ಪಿಕ್ಮೆಕೆ 25 : ಮಂಗಳೂರು-ಉಡುಪಿಯಲ್ಲಿ ಒಡಿಸ್ಸಿ , ಮೋಹಿನಿ ಅಟ್ಟಂ
ಮಂಗಳೂರು : ಭಾರತೀಯ ಸಂಸ್ಕೃತಿ- ಸೊಗಡನ್ನು ಯುವ ಜನತೆಗೆ ತಲುಪಿಸುವ ಮಹಾತ್ಕಾರ್ಯದಲ್ಲಿ ತೊಡಗಿರುವ ಸ್ಪಿಕ್ಮೆಕೆ ಸಂಸ್ಥೆ ಈ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಬೆಳ್ಳಿ ಮಹೋತ್ಸವದ ಕಾರ್ಯಕ್ರಮಗಳು ಏಪ್ರಿಲ್ 16ರಿಂದ ಆರಂಭವಾಗಲಿವೆ.
ಭಾರತದ ಅತ್ಯುತ್ಕೃಷ್ಟ ಕಲೆಯೆನಿಸಿರುವ ಮೋಹಿನಿ ಅಟ್ಟಂ ಮತ್ತು ಒಡಿಸ್ಸಿ ನೃತ್ಯ ಕಾರ್ಯಕ್ರಮಗಳನ್ನು ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದು ಸ್ಪಿಕ್ಮೆಕೆಯ ಮಂಗಳೂರು ಘಟಕದ ಪ್ರಕಟಣೆ ತಿಳಿಸಿದೆ.
ಮೋಹಿನಿ ಅಟ್ಟಂ ನೃತ್ಯಪಟು ಡಾ. ದೀಪ್ತಿ ಒಂಚೆರಿ ಭಾಲ್ಲಾ ಅವರು ಮೋಹಿನಿ ಅಟ್ಟಂ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಮಧುಮಿತ ರಾವ್ಟ್ ಅವರು ಒಡಿಸ್ಸಿ ನೃತ್ಯ ಪ್ರದರ್ಶಿಸಲಿದ್ದಾರೆ. ಈ ಎರಡು ಕಾರ್ಯಕ್ರಮಗಳಲ್ಲದೆ, ಸಾಂಸ್ಕೃತಿಕ ಗೋಷ್ಠಿಗಳು, ಸಂಗೀತ ಕಚೇರಿಗಳು ಹಾಗೂ ನೃತ್ಯ ಕಾರ್ಯಕ್ರಮಗಳನ್ನೂ ಸ್ಪಿಕ್ಮೆಕೆ ಆಯೋಜಿಸಿದೆ.
ಭಾರತೀಯ
ಸಂಸ್ಕೃತಿ
ಹಾಗೂ
ಕಲಾ
ಪ್ರಕಾರಗಳ
ಬಗೆಗಿನ
ಜ್ಞಾನವನ್ನು
ವಿದ್ಯಾರ್ಥಿಗಳ
ಮುಂದೆ
ಮಂಡಿಸುವ
ಹೊಣೆ
ಹೊತ್ತ
ಸ್ಪಿಕ್ಮೆಕೆ(Society
for
the
Promotion
of
Indian
classical
Music
and
Culture
Amongst
Youth)
ದೇಶಾದ್ಯಂತ
ಕಾರ್ಯನಿರ್ವಹಿಸುತ್ತಿದೆ.
ಕಾಲೇಜುಗಳಲ್ಲಿ
ಅಥವಾ
ಶೈಕ್ಷಣಿಕ
ಸಂಸ್ಥೆಗಳಲ್ಲಿ
ಕಾರ್ಯಕ್ರಮಗಳನ್ನು
ನಡೆಸಿಕೊಡುವ
ಈ
ಸಂಸ್ಥೆಯಲ್ಲಿ
ಕೆಲಸ
ನಿರ್ವಹಿಸುವವರೆಲ್ಲರೂ
ಸ್ವಯಂ
ಸೇವಕರು.
ಸ್ಪಿಕ್ಮೆಕೆ
ಬಗ್ಗೆ
ಇನ್ನಷ್ಟು
ಮಾಹಿತಿಗಳು
ಬೇಕಿದ್ದರೆ
ಸಂಪರ್ಕಿಸಿ
[email protected]
(ಇನ್ಫೋ
ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...