ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂಬಾಕು ಮಂಡಳಿ ನಿಯಮ ಗಾಳಿಗೆ : 50000 ದಶಲಕ್ಷ ಕಿಲೋ ರಫ್ತಿನ ಗುರಿ

By Staff
|
Google Oneindia Kannada News

ಬೆಂಗಳೂರು : ತಂಬಾಕು ಮಂಡಳಿ ನಿಗದಿಪಡಿಸಿರುವ ತಂಬಾಕು ಬೆಳೆಯ ಪ್ರಮಾಣಕ್ಕೇ ನಾವು ಅಂಟಿಕೊಳ್ಳಲಾಗದು. ಅದನ್ನೂ ಮೀರಿ, 60 ಸಾವಿರ ದಶಲಕ್ಷ ಕಿಲೋ ತಂಬಾಕನ್ನು ಕರ್ನಾಟಕ ಬೆಳೆಯಲಿದೆ ಎಂದು ಕೃಷಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ತಂಬಾಕು ಬೆಳೆಯ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ. ತಂಬಾಕು ಮಂಡಳಿಯ ಸಮಿತಿ ನಿಗದಿ ಪಡಿಸಿರುವ ತಂಬಾಕು ಬೆಳೆಯ ಪ್ರಮಾಣದ ಮಿತಿಯನ್ನು ನಾವು ಧಿಕ್ಕರಿಸಿದ್ದೇವೆ. ಮಂಡಳಿ ಪ್ರಕಾರ ಕರ್ನಾಟಕದಲ್ಲಿ 41 ಸಾವಿರ ದಶಲಕ್ಷ ಕಿಲೋ ತಂಬಾಕನ್ನು ಮಾತ್ರ ಬೆಳೆಯಬೇಕು. ಆದರೆ ಮಂಡಳಿಯ ಈ ನಿರ್ಧಾರವನ್ನು ತಿರಸ್ಕರಿಸಿ ನಾವು ಪತ್ರ ಬರೆದಿದ್ದೇವೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ 60 ಸಾವಿರ ದಶಲಕ್ಷ ಕಿಲೋ ತಂಬಾಕು ಬೆಳೆದರೆ, ಈ ಪೈಕಿ ಸುಮಾರು 50 ಸಾವಿರ ದಶಲಕ್ಷ ಕಿಲೋ ಮಾಲನ್ನು ರಫ್ತು ಮಾಡಬಹುದು. ಕಡಿಮೆ ತಂಬಾಕು ಬೆಳೆದು ರಫ್ತಿನ ಅವಕಾಶವನ್ನು ಬಿಟ್ಟು ಕೊಡುವುದು ಸರಿಯಲ್ಲ. ಕಳೆದ ವರ್ಷವೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತಂಬಾಕು ಬೆಳೆದ ಕಾರಣಕ್ಕೆ ತಂಬಾಕು ಮಂಡಳಿ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿತ್ತು ಎಂದು ಸಚಿವರು ಹೇಳಿದರು.

ಕೊಬ್ಬರಿ ಕೊಳ್ಳಲು ಸರ್ಕಾರ ಮಾರುಕಟ್ಟೆಗೆ : ಕೊಬ್ಬರಿ ಕೊಳ್ಳಲು ಕೇಂದ್ರ ಸರ್ಕಾರ 100 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಸರ್ಕಾರ ಮಾರುಕಟ್ಟೆ ಪ್ರವೇಶಿಸಿ, ಕೊಬ್ಬರಿ ಖರೀದಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಂಬಲ ಬೆಲೆ ಸಿಗದೆ ಹತಾಶರಾಗಿರುವ ರೈತರ ಕಣ್ಣೀರೊರೆಸುವ ನಿರ್ದಾರ ಇದಾಗಿದ್ದು, ಕೇಂದ್ರ ಸರ್ಕಾರದಿಂದ ಇನ್ನೂ 30 ಕೋಟಿ ರುಪಾಯಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X