ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ : ಮಾತಲ್ಲೆ ಹಂಪೆಯ ಅಭಿವೃದ್ಧಿ!

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Kallina Rathaಬೆಂಗಳೂರು : ಕನ್ನಡ ಸಂಸ್ಕೃತಿ- ಪರಂಪರೆಯ ಪ್ರತೀಕವೆನಿಸಿರುವ ಹಂಪೆಯ ಅಭಿವೃದ್ಧಿಯಾಗಬೇಕು. ಅದು ಅತ್ಯುತ್ತಮ ಹಾಗೂ ಪ್ರಸಿದ್ಧ ಪ್ರವಾಸೀ ತಾಣವಾಗಿ ಬೆಳೆಯಬೇಕು ಎಂದೆಲ್ಲಾ ರಾಜ್ಯ ಸರಕಾರ ಬೊಂಬಡ ಹೊಡೆಯುತ್ತದೆ. ಸರ್ಕಾರದ ಬಣ್ಣದ ಮಾತುಗಳನ್ನು ಜನರೂ ನಂಬುತ್ತಾರೆ. ಹಂಪೆಯ ಬಗ್ಗೆ ಕನಸು ಕಾಣುತ್ತಾರೆ. ಆದರೆ ಹಂಪೆಯ ಬಗ್ಗೆ ನಿಜವಾಗಿ ಕಾಳಜಿ ಇರುವವರನ್ನು ಸರಕಾರ ಹೇಗೆ ನಡೆಸಿಕೊಳ್ಳುತ್ತದೆ.

ಹಂಪೆಯ ಬಗ್ಗೆ ನಿಜವಾಗಿ ಕಾಳಜಿ ಇರುವವರನ್ನು ಸರಕಾರ ಕಣ್ಣೆತ್ತಿ ಕೂಡ ನೋಡುವುದಿಲ್ಲ ಎನ್ನುತ್ತಾರೆ ಸಾಕ್ಷ್ಯಚಿತ್ರ ನಿರ್ಮಾಪಕ ಬಿ.ಎನ್‌. ಚಂದ್ರಕಾಂತ್‌. ನಾನು ಹಂಪಿಯ ಬಗ್ಗೆ ಎರಡು ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದ್ದೇನೆ. ಅದನ್ನು ಕೊಳ್ಳುವಂತೆ ಸರಕಾರಕ್ಕೆ 9 ಪತ್ರ ಬರೆದಿದ್ದೇನೆ. ಕರ್ನಾಟಕ ಸರಕಾರ ಒಂದೇ ಒಂದು ಪತ್ರಕ್ಕೂ ಉತ್ತರಿಸುವ ಸೌಜನ್ಯ ತೋರಿಲ್ಲ...ಹೀಗೆ ಅಸಮಾಧಾನ ಮತ್ತು ಸರಕಾರದ ಮೇಲಿನ ಸಿಟ್ಟನ್ನು ತೋಡಿಕೊಳ್ಳುತ್ತಾರೆ ಚಂದ್ರಕಾಂತ್‌.

ಚಂದ್ರಕಾಂತ್‌ ಬಳಿ ಹಾಳು ಹಂಪೆಯ ಬಗ್ಗೆ ಎರಡು ಸಾಕ್ಷ್ಯಚಿತ್ರಗಳಿವೆ. ವ್ಹಿಸ್ಪರಿಂಗ್‌ ಸ್ಟೋನ್ಸ್‌ ಮತ್ತು ರಿದಮ್‌ ಆಫ್‌ ಸೈಲೆನ್ಸ್‌ ಎರಡೂ ಚಿತ್ರಗಳು ಹಂಪಿಯ ಕಲ್ಲುಗಳ ಕಥೆ ಹೇಳುತ್ತವೆ. ಕಳೆದೆರಡು ವರ್ಷಗಳಿಂದ ಈ ಎರಡು ಚಿತ್ರಗಳನ್ನು ಕೊಳ್ಳುವಂತೆ ಚಂದ್ರಕಾಂತ್‌ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಸರಕಾರದ ಕಡೆಯಿಂದ ಒಂದು ಮಾತಿಲ್ಲ.

ಹಂಪೆಯ ಬಗ್ಗೆ ಇಂತಹ ವಿಶೇಷ ಸಾಕ್ಷ್ಯ ಚಿತ್ರವನ್ನು ಹಿಂದೆಂದೂ, ಯಾರೂ ಮಾಡಿಲ್ಲ. ಅಷ್ಟೊಂದು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಸಾಕ್ಷ್ಯಚಿತ್ರದ ಗುಣಮಟ್ಟವೂ ಅಷ್ಟೇ ಉತ್ತಮವಾಗಿದೆ. ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರವನ್ನು ತೆಗೆಯಲಾಗಿದೆ. ಚಿತ್ರವನ್ನು 20 ಎಪಿಸೋಡ್‌ಗಳನ್ನಾಗಿಯೂ ವಿಂಗಡಿಸಬಹುದು. ನನಗೆ ಚಿತ್ರ ನಿರ್ಮಾಣದ ಹಣ , 30 ಲಕ್ಷ ರೂಪಾಯಿ ಕೊಟ್ಟರೆ ಸಾಕು. ಸಾಲ ಮಾಡಿ ಈ ಚಿತ್ರ ಮಾಡಿರುವುದರಿಂದ ನನಗೆ ಹಣದ ತುರ್ತು ಇದೆ ಎಂದು ಚಂದ್ರಕಾಂತ್‌ ಕಷ್ಟ ತೋಡಿಕೊಳ್ಳುತ್ತಾರೆ.

ಯಾಕಿಷ್ಟು ಉಡಾಫೆ ?

ಚಂದ್ರಕಾಂತ್‌ 300ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ತೆಗೆದ ಅನುಭವ ಉಳ್ಳವರು. ಸರಕಾರ ಯಾಕೆ ಇಷ್ಟು ಉಡಾಫೆಯಾಗಿ ವರ್ತಿಸುತ್ತದೆ ಎಂಬ ಬಗ್ಗೆ ಅವರಿಗೆ ಆಶ್ಚರ್ಯ. ಹಂಪೆಯ ಜೀರ್ಣೋದ್ಧಾರ ಮಾಡ ಬಯಸುವವರಿಗೆ ಈ ಚಿತ್ರ ತುಂಬಾನೇ ಸಹಕಾರಿಯಾಗಬಲ್ಲುದು. ಜೀರ್ಣೋದ್ಧಾರದ ಯೋಜನೆಗಳನ್ನು ಘೋಷಿಸಿದವರು ಚಿತ್ರವನ್ನು ನಿರ್ಲಕ್ಷಿಸುತ್ತಾರೆ ? ಅಲ್ಲದೆ ಈ ಸಾಕ್ಷ್ಯಚಿತ್ರವನ್ನು ಸಿ.ಡಿಯಾಗಿ ಪರಿವರ್ತಿಸಬಹುದು. ಸಣ್ಣ ಚಲನಚಿತ್ರವನ್ನಾಗಿಸಬಹುದು. ಪ್ರವಾಸೋದ್ಯಮದ ಅಭಿವೃದ್ಧಿಗೆ ಒಂದು ಸಾಧನವನ್ನಾಗಿಯೂ ಇದನ್ನು ಬಳಸಬಹುದು.

ಹಂಪೆಯ ಬಗೆಗಿನ ಸಾಕ್ಷ್ಯಚಿತ್ರ ಎರಡು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈಗಾಗಲೇ ಪ್ರದರ್ಶಿತವಾಗಿದೆ. ಆಸ್ಕರ್‌ ಪ್ರಶಸ್ತಿಗೆ ಮುಂಚಿತವಾಗಿ ನಡೆಯುವ, ಕೊಳ್ಳುವವರ ಮತ್ತು ಮಾರುವವರ (buyer-seller meet)ಸಮಾವೇಶಕ್ಕೂ ಚಂದ್ರಕಾಂತ್‌ ಅವರಿಗೆ ಹಾಲಿವುಡ್‌ನಿಂದ ಆಹ್ವಾನ ಬಂದಿದೆ. ಆದರೆ ಚಂದ್ರಕಾಂತ್‌ ಈ ಆಹ್ವಾನದಿಂದ ಅಷ್ಟೇನೂ ಖುಷಿಯಾಗಿಲ್ಲ. ಅವರು ಹೇಳುವುದು - ನನ್ನ ಬಳಿ ವಿದೇಶಕ್ಕೆ ಹೋಗುವಷ್ಟು ಹಣ ನನ್ನ ಬಳಿ ಇಲ್ಲ.
ಸರ್ಕಾರ ಮತ್ತೂ ಸುಮ್ಮನಿದೆ!

ಹಂಪೆ : ಹತ್ತು ದಿಕ್ಕು ನೂರು ದಿನ
ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X