ಕಳ್ಳರ ಕಾಟ ತಪ್ಪಿಸಲು ಇಂದಿರಾನಗರ, ರಾಜಾಜಿನಗರದಲ್ಲಿ ‘ಹಲೋ ನೈಬರ್’
ಬೆಂಗಳೂರು : ಹಸುಗಳ ಹಿಡಿದು, ಎಂಜಿ ರೋಡಿನಲ್ಲಿ ಸೈಕಲ್ ತುಳಿಯದಂತೆ ಮಾಡಿ, ಒಡವೆ ತೊಡಬೇಡಿರೆಂದು ಹೆಂಗಸರನ್ನು ಕೋರಿದ ಸೂಪರ್ಕಾಪ್ ಎಚ್.ಟಿ.ಸಾಂಗ್ಲಾಯಾನ ಅವರಿಗೂ ಬೆಂಗಳೂರಿನ ಅಪರಾಧ ನಿಯಂತ್ರಣ ದೊಡ್ಡ ಸವಾಲಾಯಿತೆ?
ಖಂಡಿತ ಹೌದು. ಬುಧವಾರ ಬೆಂಗಳೂರು ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಸುದ್ದಿಗೋಷ್ಠಿ ಕರೆದಿದ್ದರು. ಪತ್ರಕರ್ತರ ಸವಾಲುಗಳ ಬಾಣಗಳಿಗೆ ಉತ್ತರ ಕೊಡಲು ಸಾಂಗ್ಲಿಯಾನ ಬತ್ತಳಿಕೆಯಲ್ಲಿ ಬಾಣಗಳಿರಲಿಲ್ಲ. ನಾನು ಸಾಂಗ್ಲಿಯಾನ ಬಂದಿದ್ದೇನೆ. ಜನತೆ ಇನ್ನು ನೆಮ್ಮದಿಯಿಂದ ಇರಬಹುದು- ಹಾಗಂತ ಕಮಿಷನರ್ ಆದ ನಂತರ ತಾವು ಹೇಳಿದ್ದರಲ್ಲ. ಆದರೆ ನೆಮ್ಮದಿ ಇಲ್ಲವಂತ ಅಂತ ಪತ್ರಕರ್ತರು ಎರಗಿದಾಗ, ನಾನು ಹಾಗೆ ಹೇಳೇ ಇರಲಿಲ್ಲ ಅಂದರು ಸಾಂಗ್ಲಿಯಾನ.
ಕೆಲವು ಅದಕ್ಷ ಪೊಲೀಸ್ ಅಧಿಕಾರಿಗಳ ದೆಸೆಯಿಂದ ಅಪರಾಧ ನಿಯಂತ್ರಣ ಕಷ್ಟವಾಗುತ್ತಿದೆ ಎಂಬುದನ್ನು ಮುಕ್ತವಾಗಿ ಒಪ್ಪಿಕೊಂಡ ಸಾಂಗ್ಲಿಯಾನ, ತಮ್ಮ ಮಿತಿಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯ ಅಸಹಾಯಕತೆಯನ್ನೂ ತೋಡಿಕೊಂಡರು. ತಾವು ಬಯಸುವ ಪೊಲೀಸ್ ಅಧಿಕಾರಿಗಳಿಗೆ ನಗರದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರೆ, ಜನರಲ್ಲಿ ಮತ್ತೆ ವಿಶ್ವಾಸ ಮೂಡಿಸುವುದಾಗಿ ಹೇಳಿದರು.
ಹೆಚ್ಚಿನ ಪ್ರಶ್ನೆಗಳಿಗೆ ಮೌನ, ಕೆಲವಕ್ಕೆ ನಿರಾಸೆಯ ಉತ್ತರ, ಪೆಚ್ಚು ಮುಖ- ಇದು ಬುಧವಾರದ ಸಾಂಗ್ಲಿಯಾನ. ಅಂದಹಾಗೆ, ಗುರುವಾರ ಹಾಡು ಹಗಲೇ ಕೃಷ್ಣ ರಾಜಪುರದಲ್ಲಿ ಒಬ್ಬಾತನ ಮೇಲೆ ಗುಂಡು ಹಾರಿಸಿ ಮೂವರು ದುಷ್ಕರ್ಮಿಗಳು 4 ಲಕ್ಷ ರುಪಾಯಿ ದೋಚಿದ್ದಾರೆ!
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಂಗ್ಲಿಯಾನಾ
ವಾಚ್