ಗಾಂಧಿ ತಾತನ ಸಬರಮತಿ ಆಶ್ರಮದಲ್ಲಿ ಹಿಂಸೆ, ಮೇಧಾಪಾಟ್ಕರ್ ಮೇಲೆ ಹಲ್ಲೆ
ಅಹ್ಮದಾಬಾದ್: ಮಹಾತ್ಮಾ ಗಾಂಧೀಜಿ ಸ್ಥಾಪಿಸಿದ್ದ ಸಬರಮತಿ ಆಶ್ರಮದಲ್ಲಿ ಮೊತ್ತ ಮೊದಲ ಬಾರಿಗೆ ಹಿಂಚಾಸಾಚಾರ ಕಾಣಿಸಿಕೊಂಡಿದ್ದು ಭಾನುವಾರ ನರ್ಮದಾ ಬಚಾವೋ ಆಂದೋಳನದ ನಾಯಕಿ ಮೇಧಾ ಪಾಟ್ಕರ್ ಮೇಲೆ ಹಲ್ಲೆ ನಡೆಯಿತು.
ಭಾನುವಾರ ಅಪರಾಹ್ನ ಮೇಧಾ ಪಾಟ್ಕರ್ ಅಧ್ಯಕ್ಷತೆಯಲ್ಲಿ ್ದ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಮಿತ್ ಠಾಕೂರ್ ಮತ್ತು ಕಾಂಗ್ರೆಸ್ ಕಾರ್ಪೊರೇಟರ್ ರಾಮ್ ಭಾಯ್ ಪಟೇಲ್ ನೇತೃತ್ವದ ಗುಂಪು ಆಶ್ರಮದೊಳಕ್ಕೆ ಮುಗ್ಗಿ ಮೇಧಾ ಪಾಟ್ಕರ್ ಅವರಿಗೆ ಮುತ್ತಿಗೆ ಹಾಕಿತು.
ಸರದಾರ್ ಸರೋವರ್ ಯೋಜನೆಯನ್ನು ವಿರೋಧಿಸಿ ಗುಜರಾತ್ಗೆ ಅನ್ಯಾಯ ಮಾಡಿದ ಮೇಧಾ ಈಗ ಶಾಂತಿ ಬೋಧನೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರ ಗುಂಪು ವ್ಯಂಗ್ಯವಾಡಿ, ಮೇಧಾ ಅವರನ್ನು ಅಕ್ಷರಶಃ ಎಳೆದಾಡಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೇಧಾ ಅವರನ್ನು ಆಶ್ರಮದೊಳಗೆ ಕರೆದುಕೊಂಡು ಹೋಗಿ ರಕ್ಷಿಸಿದರು. ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದಾಗ ಎನ್ಡಿಟಿವಿ ಕ್ಯಾಮರಾಮನ್, ಆಜ್ತಕ್ ವರದಿಗಾರ ಸೇರಿದಂತೆ 12 ಮಂದಿಗೆ ಗಾಯವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...