ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷರ್ರಫ್‌ ಹುಡುಗಾಟಕ್ಕೆ ಟೀಕೆ, ಸೀ ಬರ್ಡ್‌ಗೆ ಮೆಚ್ಚುಗೆ: ಕಾರವಾರದಲ್ಲಿ ಜಾರ್ಜ್‌

By Staff
|
Google Oneindia Kannada News

ಕಾರವಾರ : ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಯುದ್ಧ ಸಂಭವಿಸಿದಲ್ಲಿ ಕೊನೆಯ ಪ್ರಯತ್ನವಾಗಿ ಅಣ್ವಸ್ತ್ರ ಪ್ರಯೋಗಿಸಲಾಗುವುದು ಎನ್ನುವ ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರ ಹೇಳಿಕೆಯನ್ನು ಬಾಲಿಶ ಹಾಗೂ ಹತಾಶೆಯ ಪ್ರತೀಕ ಎಂದು ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಬಣ್ಣಿಸಿದ್ದಾರೆ.

ತಮ್ಮ ಹೇಳಿಕೆ ಪಾಕಿಸ್ತಾನದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಉಂಟು ಮಾಡಬಹುದೆಂದು ಮುಷರ್ರಫ್‌ ಯೋಚಿಸಿದ್ದಾರೆಯೇ? ಅವರ ಹೇಳಿಕೆ ಬೇಜವಾಬ್ದಾರಿತನದ್ದು ಎಂದು ಸೀ ಬರ್ಡ್‌ ನೌಕಾ ನೆಲೆ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫರ್ನಾಂಡಿಸ್‌ ಹೇಳಿದರು.

ಜರ್ಮನ್‌ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಮುಷರ್ರಫ್‌ ಅಣ್ವಸ್ತ್ರ ಪ್ರಯೋಗದ ಕುರಿತು ಹೇಳಿಕೆ ನೀಡಿದ್ದರು. ಪಾಕಿಸ್ತಾನದ ಮೇಲೆ ಭಾರತದ ಒತ್ತಡ ಮುಂದುವರೆದು ಯುದ್ಧವಾದಲ್ಲಿ , ರಕ್ಷಣೆಯ ಕೊನೆಯ ನಡೆಯಾಗಿ ಅಣ್ವಸ್ತ್ರ ಪ್ರಯೋಗಿಸಲು ಪಾಕ್‌ ಹಿಂಜರಿಯದು ಎಂದು ಮುಷರ್ರಫ್‌ ಬೆದರಿಕೆ ಒಡ್ಡಿದ್ದರು.

ಸೀ ಬರ್ಡ್‌ ನೌಕಾನೆಲೆ ಕಾರ್ಯ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಫರ್ನಾಂಡಿಸ್‌, ಷೆಡ್ಯೂಲ್‌ ಪ್ರಕಾರ ಯೋಜನೆ ಮುಂದುವರಿಯುತ್ತಿದೆ ಎಂದರು. ಯೋಜನೆಯ ಮೊದಲ ಹಂತದಲ್ಲಿ 1290 ಕೋಟಿ ರುಪಾಯಿ ಖರ್ಚು ಮಾಡಲಾಗುವುದು. ಈಗಾಗಲೇ 60 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.

ಗುಜರಾತ್‌ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವವರ ಕುರಿತು ಕೆಂಡ ಕಾರಿದ ಫರ್ನಾಂಡಿಸ್‌, 3 ಸಾವಿರ ಸಿಖ್ಖರ ಕೊಲೆಗೆ ಕಾರಣರಾದವರಿಗೆ ನರೇಂದ್ರ ಮೋದಿ ಅವರ ರಾಜೀನಾಮೆ ಕೇಳುವ ಯಾವುದೇ ನೈತಿಕತೆಯಿಲ್ಲ ಎಂದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X