ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಡಿ ಬಾಬಾ ಪ್ರಕಟಣೆಗಳಿಗೆ ತೆರಿಗೆ ವಿನಾಯಿತಿ- ಕೋರ್ಟ್‌ ಬೆಂಬಲ

By Oneindia Staff
|
Google Oneindia Kannada News

ನವದೆಹಲಿ : ಶಿರಡಿ ಸಾಯಿಬಾಬಾ ಅವರ ಸಂದೇಶಗಳನ್ನು ಒಳಗೊಂಡ ಪುಸ್ತಕಗಳು, ಕರಪತ್ರ, ಫೋಟೋಗಳು ಹಾಗೂ ಇತರ ಪ್ರಕಟಣೆಗಳಿಗೆ ಮಾರಾಟ ತೆರಿಗೆ ವಿನಾಯಿತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರಿಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಶಿರಡಿ ಸಾಯಿಬಾಬಾ ಅವರ ಭಕ್ತರೇ ಸಾಯಿ ಪ್ರಕಾಶನ ನಿಧಿಯನ್ನು ಸ್ಥಾಪಿಸಿದ್ದಾರೆ. ಈ ನಿಧಿ ನಡೆಸುವ ವ್ಯವಹಾರಗಳು ಹಾಗೂ ಪುಸ್ತಕ ಪ್ರಕಟಣೆಗಳು ಯಾವುದೇ ವ್ಯಾಪಾರೀ ಉದ್ದೇಶ ಹೊಂದಿಲ್ಲ. ಬದಲಾಗಿ ಶಿರಡಿ ಸಾಯಿಬಾಬಾ ಅವರ ಸಂದೇಶಗಳನ್ನು ಸಾರುವ ಹೊಣೆ ಹೊತ್ತುಕೊಂಡಿರುವುದರಿಂದ ಈ ಪ್ರಕಟಣೆಗಳನ್ನು ಮಾರಾಟ ತೆರಿಗೆಯಿಂದ ಮುಕ್ತಗೊಳಿಸಬಹುದು ಎಂದು ಕೋರ್ಟ್‌ ತೀರ್ಪು ಹೇಳಿದೆ.

ನ್ಯಾಯಮೂರ್ತಿ ಎಸ್‌. ವಿ. ಪಾಟೀಲ್‌ ಮತ್ತು ಬಿ.ಪಿ. ಸಿಂಗ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ಮಾರಾಟ ತೆರಿಗೆ ಉಪ ಆಯುಕ್ತರು 1989ರಲ್ಲಿ ಟ್ರಸ್ಟ್‌ನ ಪ್ರಕಟಣೆಗಳಿಗೆ ಮಾರಾಟ ತೆರಿಗೆ ವಿಧಿಸಬಹುದು ಎಂದು ಘೋಷಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X