ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಣೆಬೆನ್ನೂರಿನಲ್ಲಿ ರಕ್ತದೋಕುಳಿ : 37 ಅಂಗಡಿ ಭಸ್ಮ, 50 ಜನರಿಗೆ ಗಾಯ

By Oneindia Staff
|
Google Oneindia Kannada News

ಹಾವೇರಿ : 37 ಅಂಗಡಿಗಳು ಭಸ್ಮ, 50 ಮಂದಿಗೆ ತೀವ್ರ ಗಾಯ. ಈ ಪೈಕಿ ಒಬ್ಬ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶನಿವಾರ ಓಕುಳಿ ರಕ್ತದೋಕುಳಿಯಾದ ಪರಿಯಿದು.

ರಾಣೆಬೆನ್ನೂರಿನಲ್ಲಿ ದುರ್ಗಾ ದೇವಿ ಪ್ರತಿಷ್ಠಾಪಿಸಬೇಕೆಂದಿರುವ ಜಾಗೆಯಲ್ಲೇ ಕಾಮದಹನ ಮಾಡಲು ಕೆಲವು ಯುವಕರು ಮುಂದಾದರು. ಇದನ್ನು ಇನ್ನೊಂದು ಗುಂಪು ಪ್ರತಿಭಟಿಸಿತು. ಮಾತು ಬೆಳೆದು ಕಲ್ಲು ತೂರಾಟ ಪ್ರಾರಂಭವಾಯಿತು. ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ದಾಳಿ ಮಾಡಿದರು. ಅದಕ್ಕೂ ಜಗ್ಗದವರಿಗೆ ಲಾಠಿ ಪ್ರಹಾರ ನಡೆಸಿದರು. ನಂತರ ಗಾಳಿಯಲ್ಲಿ ಎರಡು ಸುತ್ತು ಗುಂಡುಗಳನ್ನು ಹಾರಿಸಿದರು. ಪೊಲೀಸರ ತೀವ್ರ ಕಾರ್ಯಾಚರಣೆಯಿಂದ ಪರಿಸ್ಥಿತಿ ಶಾಂತಗೊಂಡಿತು.

ರಾಣೆಬೆನ್ನೂರಿನಲ್ಲಿ ಏಪ್ರಿಲ್‌ 1ರವರೆಗೆ 144ನೇ ವಿದಿಯನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ರಟ್ಟಿಹಳ್ಳಿಯಲ್ಲೂ ಹಿಂಸಾಚಾರ ನಡೆದ ವರದಿಯಾಗಿದೆ. ಶುಕ್ರವಾರ ಹೋಲಿ ಗಲಭೆಯಲ್ಲಿ ಮುನವಳ್ಳಿಯಲ್ಲಿ ಮೂವರು ಮೃತ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X