ಭಾರತಕ್ಕೂ ಅಲ್- ಕ್ವೆ ೖದಾ ಉಗ್ರರು ನುಸುಳುವ ಅಪಾಯ : ಜಾರ್ಜ್ ಫರ್ನಾಂಡಿಸ್
ಬೆಂಗಳೂರು : ಅಫ್ಘನ್ನಿಂದ ಪಾಕಿಸ್ತಾನಕ್ಕೆ ಗುಳೆ ಹೊರಟಿರುವ ಅಲ್- ಕ್ವೆ ೖದಾ ಸಂಘಟನೆಯ ಉಗ್ರರು ಜಮ್ಮು- ಕಾಶ್ಮೀರಕ್ಕೂ ನುಸುಳುವ ಅಪಾಯವಿದೆ ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ ಫರ್ನಾಂಡಿಸ್ ಹೇಳಿದ್ದಾರೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಲ್) ಅಭಿವೃದ್ಧಿ ಪಡಿಸಿರುವ ಹಗುರ ಹೆಲಿಕಾಪ್ಟರ್ (ಎಎಲ್ಎಚ್) ‘ಧ್ರುವ’ವನ್ನು ಭಾರತೀಯ ವಾಯು ಪಡೆಗೆ ಹಸ್ತಾಂತರಿಸಿದ ಸಮಯದಲ್ಲಿ ಸುದ್ದಿಗಾರರೊಡನೆ ಶನಿವಾರ ಸಚಿವರು ಮಾತಾಡುತ್ತಿದ್ದರು. ನಾವು ಕೇಳಿರುವ 20 ಉಗ್ರರನ್ನು ಹಸ್ತಾಂತರಿಸುವವರೆಗೆ ಪಾಕಿಸ್ತಾನದ ಜೊತೆ ಮಾತುಕತೆ ಸಾಧ್ಯವಿಲ್ಲ ಎಂದರು.
ತೆಹಲ್ಕಾ ಬಯಲು ಮಾಡಿದ ಹಗರಣದ ನಂತರ ಮಿಲಿಟರಿ ಬಣಗಳಿಗೆ ವಿನಿಯೋಗಿಸುವ ಹಣದಲ್ಲಿ ಪ್ರತಿತ 18ರಷ್ಟು ಕಡಿತವಾಗಿತ್ತು. ಆದರೀಗ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆ ಚುರುಕಾಗಿದೆ. ಮದ್ದು -ಗುಂಡುಗಳ ಸಂಗ್ರಹಣೆ, ರಕ್ಷಣೆಗೆಂದೇ 500 ಕೋಟಿ ರುಪಾಯಿ ವಿನಿಯೋಗಿಸಲಾಗುತ್ತಿದೆ. ದೇಶದ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿಗೆ ಸಿದ್ಧವಿಲ್ಲ. ಭದ್ರತೆ ಬಹು ಮುಖ್ಯ ಎಂದು ಸಚಿವ ಫರ್ನಾಂಡಿಸ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...