ರಾಜಕೀಯ ಕ್ರಿಕೆಟ್ನಂತೆ, ಪಕ್ಷ ಬಯಸಿದರೆ ಸಚಿವ ಸ್ಥಾನ ತ್ಯಾಗ- ಅನಂತಕುಮಾರ್
ಹುಬ್ಬಳ್ಳಿ : ರಾಜಕೀಯ ಕ್ರಿಕೆಟ್ ಆಟದಂತೆ. ಕ್ರಿಕೆಟ್ನಲ್ಲಿ ಸಂಭವಿಸುವಂತೆಯೇ ಸೋಲು ಗೆಲುವು ರಾಜಕೀಯದಲ್ಲೂ ಸಾಮಾನ್ಯ ಎಂದು ಕೇಂದ್ರ ಸಚಿವ ಅನಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಭಾರತೀಯ ಜನತಾ ಪಕ್ಷ ಎದುರಿಸುತ್ತಿರುವ ತೀವ್ರ ಹಿನ್ನೆಡೆಯ ಕುರಿತು ಪ್ರಸ್ತಾಪಿಸಿದ ಅನಂತಕುಮಾರ್, ಪಕ್ಷದ ಹಿನ್ನಡೆ ತಾತ್ಕಾಲಿಕ ಎಂದರು. ಹುಬ್ಬಳ್ಳಿಯಲ್ಲಿ ನಡೆದ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಅನುಭವಿಸಿದ ದಾರುಣ ಸೋಲು ಹಾಗೂ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅನುಭವಿಸಿದ ಮುಖಭಂಗದ ಹಿನ್ನೆಲೆಯಲ್ಲಿ ಅನಂತಕುಮಾರ್ ಆತ್ಮಾವಲೋಕನ ಧಾಟಿಯಲ್ಲಿ ಮಾತನಾಡಿದರು. ಪಕ್ಷದ ಹಿತಕ್ಕೆ ಅಗತ್ಯವಾದಲ್ಲಿ ತಾವು ಅಧಿಕಾರ ತ್ಯಾಗ ಮಾಡುವುದಾಗಿ ಅನಂತಕುಮಾರ್ ಪ್ರಕಟಿಸಿದರು.
ತಮಗೆ ಅಧಿಕಾರ ದಾಹವಿಲ್ಲ . ಪಕ್ಷ ಬಯಸಿದಲ್ಲಿ ಸಚಿವ ಸ್ಥಾನ ತ್ಯಜಿಸುತ್ತೇನೆ ಎಂದು ಅನಂತಕುಮಾರ್ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷವನ್ನು ಬಲ ಪಡಿಸಲು ಮಂದಿನ ದಿನಗಳಲ್ಲಿ ತಾವು ಶ್ರಮಿಸುವುದಾಗಿ ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...