ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀನಾಮೆ ಹಿಂತೆಗೆದುಕೊಳ್ಳಲು ರಂಗಾಯಣ ನಿದೇಶಕ ಪ್ರಸನ್ನ ಸಮ್ಮತಿ

By Oneindia Staff
|
Google Oneindia Kannada News

Prasanna - Rangayana Director withdraws resignationಮೈಸೂರು: ವಿವಾದಿತ ರಂಗಾಯಣದ ನಿರ್ದೇಶಕರಾಗಿ ಮುಂದುವರೆಯಲು ಎಸ್‌. ಪ್ರಸನ್ನ ಅವರು ಒಪ್ಪಿಕೊಂಡಿದ್ದಾರೆ.

ರಂಗಾಯಣದ ವಿವಾದಗಳಿಂದ ರೋಸಿ ಹೋಗಿದ್ದ ಪ್ರಸನ್ನ ಅವರು ಮಾರ್ಚ್‌ 23ರಂದು ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವರು, ರಂಗಾಯಣ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ವಿಭಾಗದ ನಿರ್ದೇಶಕರು, ರಂಗಾಯಣದ ನಿರ್ದೇಶಕ ಸ್ಥಾನದಲ್ಲಿಯೇ ಮುಂದುವರೆಯುವಂತೆ ಪ್ರಸನ್ನ ಅವರನ್ನು ಮನವೊಲಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಸನ್ನ ಅವರು ರೂಪಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಲು ಸಿದ್ಧವಿದೆ. ಅನಗತ್ಯ ಗೊಂದಲಗಳಿಗೆ ಗಮನ ಕೊಡದೇ ಅವರು ರಂಗಾಯಣವನ್ನು ನಡೆಸಿಕೊಂಡು ಹೋಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಪ್ರಸನ್ನ ಅವರಿಗೆ ಕಿವಿ ಮಾತು ಹೇಳಿದ್ದಾರೆ.

ಆದರೆ ಪ್ರಸನ್ನ ಅವರು ಜೂನ್‌ವರೆಗೆ ರಂಗಾಯಣದ ನಿರ್ದೇಶಕ ಜವಾಬ್ದಾರಿಯನ್ನು ಹೊರುತ್ತೇನೆ. ಆಮೇಲೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X