ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏ.1ರಿಂದ ಉಡುಪಿಯಲ್ಲಿ ಮಂತ್ರಾಲಯ ಸ್ವಾಮೀಜಿಗಳ ವರ್ಧ್ಯಂತ್ಯುತ್ಸವ
ಉಡುಪಿ: ಮಂತ್ರಾಲಯ ರಾಘವೇಂದ್ರ ಮಠದ ಶ್ರೀ ಸುಶಮೀಂದ್ರ ತೀರ್ಥ ಸ್ವಾಮೀಜಿ ಅವರ ಅಮೃತ ಮಹೋತ್ಸವವನ್ನು ಏಪ್ರಿಲ್ 1ರಿಂದ ನಾಲ್ಕು ದಿನಗಳ ಕಾಲ ಉಡುಪಿ ಮಠದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಇದು ಸುಶಮೀಂದ್ರ ಸ್ವಾಮೀಜಿಯ 75ನೇ ವರ್ಧಂತ್ಯುತ್ಸವವಾಗಿದ್ದು, ಉತ್ಸವಕ್ಕೆ ಮಂತ್ರಾಲಯ ಮಠಾಧೀಶರನ್ನು ಏಪ್ರಿಲ್ 1ರ ಸಂಜೆ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು. ಏಪ್ರಿಲ್ 2ರಂದು ಬೆಳಗ್ಗೆ ವಿದ್ವಾಂಸರಿಂದ ಪ್ರವಚನ, ಹೋಮ, ಹವನ ಮತ್ತು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಪರ್ಯಾಯ ಸ್ವಾಮೀಜಿ ಫಲಿಮಾರು ಮಠದ ವಿದ್ಯಾಧೀಶ ತೀರ್ಥಶ್ರೀಪಾದರು ಈ ವಿಷಯವನ್ನು ಮಂಗಳವಾರ ತಿಳಿಸಿದರು. ಏಪ್ರಿಲ್ 4ರಂದು ಮಂತ್ರಾಲಯ ಶ್ರೀಪಾದರಿಗೆ ಸ್ವರ್ಣನಾಣ್ಯಗಳಿಂದ ಅಭಿಷೇಕ, ತುಲಾಭಾರ, ಅಭಿನಂದನ ಪತ್ರ ಸಮರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ವರ್ಧಂತ್ಯುತ್ಸವವನ್ನು ಉದ್ಘಾಟಿಸುವರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Wednesday, March 27, 2002, 5:30 [IST]