ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಿಗಳ ನಿರ್ಲಕ್ಷ್ಯ, ನೆನೆಗುದಿಗೆ ಬಿದ್ದ ಡಾ।ಕಾರಂತ ಬಾಲವನ ಅಭಿವೃದ್ಧಿ

By Oneindia Staff
|
Google Oneindia Kannada News

ಪುತ್ತೂರು : ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಜಾ।ಶಿವರಾಮ ಕಾರಂತರ ಹೆಸರಿನಲ್ಲಿರುವ ಪುತ್ತೂರಿನ ಡಾ।ಕಾರಂತ ಬಾಲವನದ ಅಭಿವೃದ್ಧಿ ಯೋಜನೆ ನೆನೆಗುದಿಗೆ ಬೀಳಲು ಅಧಿಕಾರಶಾಹಿಯೇ ಕಾರಣ ಎಂದು ಶಾಸಕ ಡಿ.ವಿ.ಸದಾನಂದಗೌಡ ವಿಷಾದಿಸಿದ್ದಾರೆ.

ಪುತ್ತೂರಿನ ಪಿ.ಸಿ.ಎನ್‌. ಚಾನೆಲ್‌ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸದಾನಂದ ಗೌಡ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಾಲವನ ಅಭಿವೃದ್ಧಿ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ವಿಷಾದಿಸಿದರು.

ಇನ್ನೊಂದು ವರ್ಷದೊಳಗಾಗಿ ಮಂಗಳೂರು ಹಾಗೂ ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದ್ದು , ಮಂಗಳೂರು-ಹಾಸನ ರೈಲುಮಾರ್ಗ ಗೇಜ್‌ ಪರಿವರ್ತನೆಗಾಗಿ 80 ಕೋಟಿ ರುಪಾಯಿ ಅನುದಾನ ದೊರೆತಿದೆ ಎಂದರು.

ಪುತ್ತೂರು ನಗರದಲ್ಲಿ ಸರ್ಕಾರದ ಅನುದಾನದಿಂದ ಹೈಟೆಕ್‌ ಗ್ರಂಥಾಲಯವೊಂದನ್ನು ಸ್ಥಾಪಿಸಲಾಗುವುದು. ಇಲಾಖಾ ಸಿಬ್ಬಂದಿಗಳ ವರ್ಗಾವಣೆ ಕುರಿತಂತೆ ನೀತಿ ರೂಪಿಸಲಾಗುತ್ತಿದ್ದು , ಇದರಿಂದಾಗಿ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ತಪ್ಪುತ್ತದೆ ಎಂದು ಶಾಸಕ ಸದಾನಂದ ಗೌಡ ಹೇಳಿದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಹಿಟ್ಲರ್‌ ನಡವಳಿಕೆಯ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X