ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದೇವನಹಳ್ಳಿ ಬಳಿ ಹಾರ್ಡ್ವೇರ್ ಪಾರ್ಕ್ , ಆನ್ಲೈನ್ನಲ್ಲಿ 5 ಸರ್ಕಾರಿ ಸೇವೆ
- ಶೀಘ್ರದಲ್ಲೇ ದೂದ್ಗಂಗಾ ಯೋಜನೆ ಜಾರಿ
- ಗ್ರಾಮೀಣ ಅಭಿವೃದ್ಧಿ ಸಲಹಾ ಮಂಡಳಿ ಸ್ಥಾಪನೆ
- ಪಡಿತರ ಚೀಟಿ ವ್ಯವಸ್ಥೆಯ ಕಂಪ್ಯೂಟರೀಕರಣ.
- 25 ನೀರು ಪೂರೈಕೆ ಯೋಜನೆ ಕಾರ್ಯಾರಂಭ.
- ನೀರು ಸರಬರಾಜು ಯೋಜನೆಗೆ ಸಮಗ್ರ ನೀರು ನೀತಿ ಸ್ಥಾಪನೆ.
- ಬೆಂಗಳೂರಿನಲ್ಲಿ 15 ವರ್ಷ ಹಳೆಯದಾದ ವಾಹನಗಳ ಸಂಚಾರ ನಿಷೇಧ.
- ಬಸ್ ಸಮೂಹಕ್ಕೆ 2000 ಹೊಸ ಬಸ್.
- 5 ಪ್ರಮುಖ ಸರ್ಕಾರಿ ಸೇವಾ ಸೌಲಭ್ಯಗಳನ್ನು ಆನ್ಲೈನ್ನಲ್ಲಿ ಒದಗಿಸಲು 5 ಕೋಟಿ ರುಪಾಯಿ.
- ದೇವನಹಳ್ಳಿ ಬಳಿ ಹಾರ್ಡ್ವೇರ್ ಪಾರ್ಕ್ ಸ್ಥಾಪನೆ.
- ಧಾರವಾಡದಲ್ಲಿ ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ 5 ಕೋಟಿ ರುಪಾಯಿ ಬಿಡುಗಡೆ.
- ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನ ಸಂಸ್ಥೆ.
- ಮಂಗಳೂರು ಗೇಜ್ ಪರಿವರ್ತನೆ ಯೋಜನೆ ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗಿದ್ದು 2005 ರ ವೇಳೆಗೆ ಪೂರ್ಣ. ಈ ಯೋಜನೆಗೆ 15 ಕೋಟಿ ರುಪಾಯಿ ಒದಗಿಸಲಾಗುವುದು.
- ಸೊಲ್ಲಾಪುರ- ಗದಗ್ ಗೇಜ್ ಪರಿವರ್ತನೆ 2005 ರೊಳಗೆ ಪೂರ್ಣ. 20 ಕೋಟಿ ರುಪಾಯಿ ಒದಗಿಸಲಾಗುವುದು.
- ಸಕ್ಕರೆ ಉದ್ಯಮ ಪ್ರವೇಶ ತೆರಿಗೆ ಕಡಿತ.
- ದೊಡ್ಡಬಳ್ಳಾಪುರದಲ್ಲಿ ಸಿದ್ಧ ಉಡುಪು ಪಾರ್ಕ್. 20 ಸಾವಿರ ಉದ್ಯೋಗ ಸೃಷ್ಟಿ.
- ಸ್ಪಿನ್ ಸಂಸ್ಥೆ ನೆರವಿನಿಂದ ಬೈವೋಲ್ಟಿನ್ ರೇಷ್ಮೆ ತಳಿ ಅಭಿವೃದ್ಧಿ.
- ಆನ್ಲೈನ್ನಲ್ಲಿ ರೇಷ್ಮೆ ಗೂಡು ಮಾರಾಟಕ್ಕೆ ಕ್ರಮ.
- ಬಿಕ್ಕಟ್ಟಿನಲ್ಲಿರುವ ಸಕ್ಕರೆ ಕಾರ್ಖಾನೆಗೆ ಅಭಿವೃದ್ಧಿ ನಿಧಿ.
- ಮಂಡ್ಯದಲ್ಲಿ ಸಕ್ಕರೆ ಮಂಡಳಿ ಪ್ರಾದೇಶಿಕ ಕೇಂದ್ರ.
- ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಲಹಾ ಮಂಡಳಿ ಸ್ಥಾಪನೆ.
- ಕ್ಷಯ ರೋಗ ನಿರ್ಮೂಲನೆಗೆ ಕ್ರಮ.
- ಶಿಕ್ಷಣ : ಚಿನ್ನರ ಅಂಗಳ, ಜನ ಮೆಚ್ಚಿದ ಶಿಕ್ಷಕ, ಸಮುದಾಯದತ್ತ ಶಾಲೆ ಯೋಜನೆಗಳ ಜಾರಿ. ಆಯ್ದ ಶಾಲೆಗಳಲ್ಲಿ ವೈಜ್ಞಾನಿಕ ಕೇಂದ್ರಗಳ ಸ್ಥಾಪನೆ.
- ಸರ್ಕಾರಿ ಶಾಲೆಗಳಲ್ಲಿ 7 ನೇ ತರಗತಿವರೆಗೆ ಉಚಿತ ಸಮವಸ್ತ್ರ .
- ಅಂಗನವಾಡಿ ಕೇಂದ್ರಗಳಲ್ಲಿ 3 ವರ್ಷದೊಳಗಿನ ಮಕ್ಕಳಿಗೆ ಹಾಲು ಒಕ್ಕೂಟದಿಂದ ಹಾಲು.
- ದುರ್ಬಲ ವರ್ಗದವರಿಗೆ 2 ಲಕ್ಷ ಮನೆ ನಿರ್ಮಾಣ.
- ವಸತಿ ರಹಿತ ಎಲ್ಲ ಎಸ್ಸಿ- ಎಸ್ಟಿ ಪಂಗಡದವರಿಗೆ ಮನೆ.
- ನಗರದ ಅಡ್ಡಾದಿಡ್ಡಿ ಬೆಳವಣಿಗೆಗೆ ಕಡಿವಾಣ. ಸಣ್ಣ ಪಟ್ಟಣಗಳ ಬಡಾವಣೆ ಅಭಿವೃದ್ಧಿಗೆ ಕ್ರಮ.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, March 21, 2002, 5:30 [IST]