ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳತ್ತೂರು ಮಣಿಯಿಂದ ಮುಖ್ಯಮಂತ್ರಿ ಕೃಷ್ಣಗೆ ಜೀವ ಬೆದರಿಕೆ?

By Staff
|
Google Oneindia Kannada News

ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಕೊಲೆ ಬೆದರಿಕೆ ಇದೆಯಾ?
ಅವರ ಆಪ್ತ ವಲಯಗಳು -ಹೌದೆನ್ನುತ್ತಿವೆ. ಜೊತೆಗೆ ಕನ್ನಡ ಚಳವಳಿ ಕೇಂದ್ರ ಸಮಿತಿ ಈ ಕೊಲೆ ಬೆದರಿಕೆಯ ಹಿಂದೆ ಕೊಳತ್ತೂರು ಮಣಿ ಕೈವಾಡವಿದೆ ಎಂದು ಸೋಮವಾರ ಆ-ಪಾ-ದಿಸಿದೆ.

ವೀರಪ್ಪನ್‌ ಶಿಕಾರಿ ಕಾರ್ಯ ಚುರುಕಾಗಿದೆ. ವಿಶೇಷ ಕಾರ್ಯಾಚರಣೆ ಪಡೆ ಪೊಲೀಸರು ವೀರಪ್ಪನ್‌ ಸಹಚರರು ಹಾಗೂ ತಮಿಳು ಉಗ್ರಗಾಮಿಗಳನ್ನು ಬಂಧಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಯತ್ನವೇ ಮುಖ್ಯಮಂತ್ರಿಗಳಿಗೆ ಕೊಲೆ ಬೆದರಿಕೆ. ಇದರ ಹಿಂದೆ ತಮಿಳು ಉಗ್ರರ ಬೆಂಬಲಿಗ ಕೊಳತ್ತೂರು ಮಣಿ ಕೈವಾಡವಿರುವ ಅನುಮಾನವಿದೆ ಎಂದು ಕನ್ನಡ ಚಳವಳಿ ಹೋರಾಟ ಸಮಿತಿ ಅಧ್ಯಕ್ಷ ಜಿ.ನಾರಾಯಣ ಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲೂ ತಮಿಳು ಉಗ್ರರ ಸಂಖ್ಯೆ ಕಡಿಮೆಯೇನೂ ಇಲ್ಲ. ಕನ್ನಡ ನಾಡು- ನುಡಿಯ ವಿರುದ್ಧ ಕೆಲಸ ಮಾಡುತ್ತಿರುವ ಇವರನ್ನು ಮಟ್ಟ ಹಾಕುವುದು -ಅನಿವಾರ್ಯವಾಗಿದೆ ಎಂದು ನಾರಾಯಣ ಕುಮಾರ್‌ ಎಚ್ಚರಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X