ಆರ್ಎಸ್ಎಸ್ನಿಂದ ಬಿಜೆಪಿ ದೂರ, ಬಿಜೆಪಿಯಿಂದ ಆರ್ಎಸ್ಎಸ್ ದೂರ
ಬೆಂಗಳೂರು : ಕೆಲವು ಸ್ವಯಂ ಸೇವಕರಷ್ಟೇ ಕೇಂದ್ರ ಸರ್ಕಾರದಲ್ಲಿ ದ್ದಾರೆ. ಉಳಿದಂತೆ ಭಾರತೀಯ ಜನತಾ ಪಕ್ಷದೊಂದಿಗೆ ತಾನು ಸಂಪರ್ಕ ಕಡೆದುಕೊಂಡಿರುವುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶುಕ್ರವಾರ ಪ್ರಕಟಿಸಿದೆ.
1999 ರಿಂದ ಆರ್ಎಸ್ಎಸ್ ಅಜೆಂಡಾದಿಂದ ಬಿಜೆಪಿ ದೂರ ಸರಿಯುತ್ತಿದ್ದು , ಆ ಪಕ್ಷದೊಂದಿಗೆ ಆರ್ಎಸ್ಎಸ್ ಸಂಪರ್ಕ ಕಡಿದುಕೊಂಡಿದೆ ಎಂದು ಆರ್ಎಸ್ಎಸ್ ವಕ್ತಾರ ಎಂ.ಜಿ.ವೈದ್ಯ ತಿಳಿಸಿದ್ದಾರೆ. ಆರ್ಎಸ್ಎಸ್ನ ಮೂರು ದಿನಗಳ ರಾಷ್ಟ್ರೀಯ ಪ್ರತಿನಿಧಿ ಸಭೆ ನಡೆಯುತ್ತಿರುವ ಬೆಂಗಳೂರಿನ ಹೊರ ವಲಯದ ಚನ್ನೇನಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
1998 ರವರೆಗೂ ಬಿಜೆಪಿ ತನ್ನ ಅಜೆಂಡಾದಲ್ಲಿ ರಾಮ ಮಂದಿರ ವಿಷಯವನ್ನು ಸೇರಿಸಿಕೊಂಡಿತ್ತು . ಆದರೆ, 1999 ರ ನಂತರ ರಾಮ ಮಂದಿರ ವಿಷಯದಿಂದ ಬಿಜೆಪಿ ದೂರ ಸರಿದು ಎನ್ಡಿಎ ಅಜೆಂಡಾ ಅಳವಡಿಸಿಕೊಂಡಿತು ಎಂದು ವೈದ್ಯ ಹೇಳಿದರು.
ನರೇಂದ್ರ
ಮೋದಿಗೆ
ಸರ್ಟಿಫಿಕೇಟ್
ಗೋಧ್ರಾ
ಹಿಂಸಾಚಾರದ
ನಂತರ
ಗುಜರಾತ್ನಲ್ಲಿ
ಸಂಭವಿಸಿದ
ಹಿಂಸಾಚಾರವನ್ನು
ಹಿಂದೂಗಳ
ಸಹಜ
ಪ್ರತಿಕ್ರಿಯೆ
ಎಂದು
ಬಣ್ಣಿಸಿದ
ವೈದ್ಯ,
ಹಿಂಸಾಚಾರವನ್ನು
ತಹಬಂದಿಗೆ
ತರುವಲ್ಲಿ
ಮುಖ್ಯಮಂತ್ರಿ
ನರೇಂದ್ರ
ಮೋದಿ
ಅವರ
ನೇತೃತ್ವದ
ಗುಜರಾತ್
ಸರ್ಕಾರ
ಸಮರ್ಪಕವಾಗಿ
ಕಾರ್ಯ
ನಿರ್ವಹಿಸಿದೆ
ಎಂದು
ಪ್ರಶಂಸಿದರು.
ಗೋಧ್ರಾ ಹಿಂಸಾಚಾರಕ್ಕೂ, ಅಯೋಧ್ಯೆಯ ಮಂದಿರ ಘಟನೆಗೂ ಸಂಬಂಧವಿಲ್ಲ ಎಂದು ವೈದ್ಯ ಸ್ಪಷ್ಟಪಡಿಸಿದರು. ಎರಡೂ ಘಟನೆಗಳಿಗೆ ಸಂಬಂಧ ಇರುವುದಾದರೆ ಗೋಧ್ರಾ ಮುಸ್ಲಿಮರಷ್ಟೆ ಏಕೆ ಪ್ರತಿಭಟನೆ ವ್ಯಕ್ತಪಡಿಸುತ್ತಾರೆ? ಅಯೋಧ್ಯೆ ಬಳಿಯ ಮುಸ್ಲಿಮರು ಸುಮ್ಮನಿರುವುದೇಕೆ ಎಂದು ಅವರು ಪ್ರಶ್ನಿಸಿದರು. ಇತ್ತೀಚೆಗೆ ನಡೆದ ಹಿಂಸಾಚಾರವನ್ನೇ ಹೋಲುವ 5 ದಿನಗಳ ಹತ್ಯಾಕಾಂಡ 1969 ರಲ್ಲೂ ಗುಜರಾತ್ನಲ್ಲಿ ಸಂಭವಿಸಿತ್ತು . ಆಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...