ತಾರಾದೇವಿ ತಕರಾರು! ಎನ್ಆರ್ಐ ಮಲ್ಯ ನಾಮಪತ್ರ ತಿರಸ್ಕರಿಸಲು ಆಗ್ರಹ
ಬೆಂಗಳೂರು : ಮಾರ್ಚ್ 27 ರ ರಾಜ್ಯಸಭಾ ಚುನಾವಣೆಗೆ ಜನತಾ ಪರಿವಾರದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮದ್ಯೋದ್ಯಮಿ ವಿಜಯ ಮಲ್ಯ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಭಾರತೀಯ ಜನತಾ ಪಕ್ಷ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದೆ.
ಮಲ್ಯ ಅವರು ಅನಿವಾಸಿ ಭಾರತೀಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬಾರದು ಎಂದು ಬಿಜೆಪಿಯ ರಾಜ್ಯಸಭಾ ಚುನಾವಣಾ ಅಭ್ಯರ್ಥಿ ಡಿ.ಕೆ.ತಾರಾದೇವಿ ಸಿದ್ಧಾರ್ಥ ಅವರು ಕರ್ನಾಟಕ ವಿಧಾನಸಭೆ ಹಾಗೂ ಚುನಾವಣಾಧಿಕಾರಿ ಯಾಕೂಬ್ ಷರೀಫ್ ಅವರಿಗೆ ತಕರಾರು ಅರ್ಜಿ ಸಲ್ಲಿಸಿದ್ದು , ಪತ್ರದ ಪ್ರತಿಗಳನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ತಾವೊಬ್ಬ ಅನಿವಾಸಿ ಭಾರತೀಯ ಎಂದು ಮಲ್ಯ ಅವರೇ ಸ್ವಯಂ ಘೋಷಿಸಿಕೊಂಡಿದ್ದಾರೆ. ಆದರೆ, ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮೋಸದಿಂದ ಸೇರಿಸಿದ್ದಾರೆ ಎಂದು ತಾರಾದೇವಿ ಆಪಾದಿಸಿದರು.
ಶನಿವಾರ
ಮಲ್ಯ
ಭವಿಷ್ಯ
ನಿರ್ಧಾರ
ತಾರಾದೇವಿ
ಅವರ
ತಕರಾರಿನ
ಹಿನ್ನೆಲೆಯಲ್ಲಿ
ಮಲ್ಯ
ಅವರಿಗೆ
ತಮ್ಮ
ಪಾಟಿ
ಸವಾಲನ್ನು
ಸಲ್ಲಿಸಲು
ಚುನಾವಣಾಧಿಕಾರಿ
ಯಾಕೂಬ್
ಷರೀಫ್
ಅವಕಾಶ
ಮಾಡಿಕೊಟ್ಟಿದ್ದಾರೆ.
ಉಭಯ
ಪಕ್ಷಗಳ
ಪಾಟಿ
ಸವಾಲು
ಆಲಿಸಿದ
ನಂತರ
ಮಲ್ಯ
ಅವರ
ನಾಮಪತ್ರ
ಕುರಿತು
ತೀರ್ಮಾನ
ಕೈಗೊಳ್ಳಲಾಗುವುದು
ಎಂದು
ಷರೀಫ್
ಅವರು
ಸುದ್ದಿಗಾರರಿಗೆ
ತಿಳಿಸಿದ್ದಾರೆ.
ಅನಗತ್ಯ
ವಿವಾದ,
ನನಗೆ
ನಿರಾಶೆಯಾಗಿದೆ-
ಮಲ್ಯ
ತಮ್ಮ
ಮೇಲೆ
ತಾರಾದೇವಿ
ಅವರು
ಹೊರಿಸಿರುವ
ಎನ್ಆರ್ಐ
ಆಪಾದನೆಯ
ಬಗ್ಗೆ
ತೀವ್ರ
ನಿರಾಶೆ
ವ್ಯಕ್ತಪಡಿಸಿರುವ
ಮಲ್ಯ,
ಇದೊಂದು
ಅಸಂಗತ
ಹಾಗೂ
ತಳ
ರಹಿತ
ಆಪಾದನೆ
ಎಂದಿದ್ದಾರೆ.
2000
ಇಸವಿಯ
ರಾಜ್ಯಸಭಾ
ಚುನಾವಣೆಯಲ್ಲಿ
ಅಡ್ಡಿಯಾಗದ
ವಿಷಯವನ್ನು
ಈಗ
ದೊಡ್ಡದು
ಮಾಡಲಾಗುತ್ತಿದೆ.
ನನ್ನ
ಸ್ಥಾನಮಾನ
ಸ್ಪಷ್ಟವಾಗಿದೆ.
ನಾನೊಬ್ಬ
ಭಾರತೀಯ
ಎಂದು
ಮಲ್ಯ
ಪ್ರತಿಕ್ರಿಯಿಸಿದ್ದಾರೆ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...