ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಹೋಮ, ಮಾತೆ ಮಹಾದೇವಿ ಕಿಡಿಕಿಡಿ
ಹುಬ್ಬಳ್ಳಿ : ವಿರಕ್ತ ಮಠಗಳ ವ್ಯಾಪ್ತಿಗೆ ಬರುವ ಜಿಲ್ಲೆಯ ಮೂರು ಸಾವಿರ ಮಠದಲ್ಲಿ ಇತ್ತೀಚೆಗೆ ಹೋಮ ನಡೆಸಿರುವುದನ್ನು ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಖಂಡಿಸಿದ್ದಾರೆ.
ಯಜ್ಞ, ಯಾಗ ಹಾಗೂ ಹೋಮ ಮಾಡುವುದು ವೀರಶೈವ ಧರ್ಮಕ್ಕೆ ವಿರುದ್ಧವಾದ ಆಚರಣೆ. ಮಠದಲ್ಲಿ ಹೋಮಕ್ಕೆ ಅವಕಾಶ ನೀಡುವ ಮೂಲಕ ಮೂರು ಸಾವಿರ ಮಠದ ಸ್ವಾಮೀಜಿ ವೀರಶೈವ ಧರ್ಮಕ್ಕೆ ವಿರುದ್ಧವಾದ ಆಚರಣೆ ನಡೆಸಿ, ಧರ್ಮಕ್ಕೆ ಅಪಚಾರವೆಸಗಿದ್ದಾರೆ ಎಂದು ಮಾತೆ ಮಹಾದೇವಿ ಆರೋಪಿಸಿದ್ದಾರೆ.
ಸ್ವತಃ ಯಜ್ಞ ಮಾಡುವುದಾಗಲಿ, ಅಥವಾ ಯಜ್ಞ ನಡೆಸಲು ಅವಕಾಶ ನೀಡುವುದಾಗಲೀ ವೀರಶೈವ ಧರ್ಮಕ್ಕೆ ತಕ್ಕುದಾದುದಲ್ಲ. ಹೋಮ ಮಾಡಲು ಅವಕಾಶ ನೀಡಿದ ಮೂರು ಸಾವಿರ ಮಠದ ಸ್ವಾಮೀಜಿಗೆ ‘ಶ್ರೀ ಗುರು ಬಸವಲಿಂಗಾಯ ನಮಃ ’ ಎಂದು ಹೇಳುವ ನೈತಿಕ ಹಕ್ಕು ಇಲ್ಲ ಎಂದು ಮಹಾದೇವಿ ಸ್ವಾಮೀಜಿಯನ್ನು ಟೀಕಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, March 15, 2002, 5:30 [IST]