ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿಯಲ್ಲಿ ಹಿಂದೂ ವಕೀಲರಹಿತ ಕಾಯಲು ಒಂದು ವೇದಿಕೆ

By Staff
|
Google Oneindia Kannada News

ಹುಬ್ಬಳ್ಳಿ ನಗರದಲ್ಲಿ ಹೊಸದೊಂದು ವೇದಿಕೆ ಆರಂಭವಾಗಿದೆ. ಇದು ಅವಳಿ ನಗರದಲ್ಲಿ ಕುಡಿಯುವ ನೀರು ಬೇಕೆಂದು ಹೋರಾಡಲು ಹುಟ್ಟಿ ಕೊಂಡ ಸಂಘವಲ್ಲ. ಅಥವಾ ಉತ್ತರ ಕರ್ನಾಟಕಕ್ಕೆ ಹೈಕೋರ್ಟ್‌ ಪೀಠ ಬೇಕು ಎಂದು ಸರಕಾರಕ್ಕೆ ಧಮಕಿ ಹಾಕಲು ರೂಪುಗೊಂಡ ಸಂಘಟನೆಯೂ ಅಲ್ಲ. ಇದು ಉತ್ತರ ಕರ್ನಾಟಕ ಹಿಂದೂ ವಕೀಲರ ಹಿತರಕ್ಷಣಾ ವೇದಿಕೆ.

ಹಿಂದೂ ವಕೀಲರ ಹಿತರಕ್ಷಣೆ ಹಾಗೂ ಹಿಂದುತ್ವದ ಪ್ರತಿಪಾದನೆಗಾಗಿ ಈ ಸಂಘಟನೆಯನ್ನು ಆರಂಭಿಸಲಾಗಿದ್ದು, ವಿಶ್ವ ಹಿಂದೂ ಪರಿಷತ್‌ನ ಆಶ್ರಯದಲ್ಲಿ ಈ ವೇದಿಕೆ ಮಾರ್ಚ್‌ 9ರಂದು ಅಸ್ತಿತ್ವಕ್ಕೆ ಬಂದಿದೆ. ಹಿರಿಯ ನ್ಯಾಯವಾದಿ ಟಿ.ಎ. ಚವ್ಹಾಣ ಅವರು ದೀಪ ಬೆಳಗಿ ವೇದಿಕೆಯನ್ನು ಉದ್ಘಾಟಿಸಿದರು.

ಹುಬ್ಬಳ್ಳಿಯ ಅಖಿಲಭಾರತ ವಿದ್ಯಾರ್ಥಿ ಪರಿಷತ್‌ನ ಕಾರ್ಯಾಲಯದಲ್ಲಿ ಔಪಚಾರಿಕವಾಗಿ ಹಿಂದೂ ವಕೀಲರ ವೇದಿಕೆಯ ಉದ್ಘಾಟನಾ ಸಮಾರಂಭ ನಡೆದಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ವಕೀಲರು ಈ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X