ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬರಿ ಮಸೀದಿಯ ಜಾಗ ಮಾರಾಟಕ್ಕಿದೆ ಎಂದು ಯಾರು ಹೇಳಿದ್ದು ?

By Staff
|
Google Oneindia Kannada News

ನವದೆಹಲಿ : ವಿವಾದ ರಹಿತ ಭೂಮಿಯಲ್ಲಿ ರಾಮಮಂದಿರವನ್ನು ನಿರ್ಮಾಣಕ್ಕಾಗಿ ಮಾರ್ಚ್‌ 15ರಂದು ಭೂಮಿ ಪೂಜೆ ನಡೆಸುವ ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರ ಪ್ರಸ್ತಾವನೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಾರಾಸಗಟಾಗಿ ತಿರಸ್ಕರಿಸಿದೆ.

ಕಂಚಿ ಶ್ರೀಗಳ ಯಾವುದೇ ಶಿಫಾರಸ್ಸಿಗೆ ಗುಣಾತ್ಮಕ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಬೋರ್ಡ್‌ನ ಕಾರ್ಯಕಾರಿ ಸಮಿತಿಯ ಪ್ರಕಟಣೆ ತಿಳಿಸಿದೆ. ಬಾಬ್ರಿ ಮಸೀದಿಯ ಜಾಗವನ್ನು ಯಾರಿಗೂ ಬಹುಮಾನ ರೂಪದಲ್ಲಿ ನೀಡುವ, ಚೌಕಾಸಿಮಾಡಿ ಕೊಂಡು ಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಕಾರ್ಯಕಾರಿ ಸಮಿತಿಯ ಸದಸ್ಯ ಸೈಯ್ಯದ್‌ ಶಹಾಬುದ್ದೀನ್‌ ಭಾನುವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಹೆಚ್‌ಪಿಯ ಶಿಫಾರಸ್ಸಿಗೂ , ಕಂಚಿ ಶ್ರೀಗಳು ಮುಂದಿಟ್ಟಿರುವ ಪ್ರಸ್ತಾವನೆಗೂ ಯಾವುದೇ ವ್ಯತ್ಯಾಸವಿಲ್ಲ. 2001 ನೇ ವರ್ಷದ ಜನವರಿಯಲ್ಲಿ ಬಾಬರಿ ಮಸೀದಿಯ ಬಗ್ಗೆ ಲಾಬೋರ್ಡ್‌ ತೆಗೆದುಕೊಂಡಿರುವ ನಿರ್ಣಯಕ್ಕೆ ಹೊರತಾದ ಬೇರೆ ಯಾವುದೇ ಪ್ರಸ್ತಾವನೆಯ ಬಗ್ಗೆ ಸರಕಾರದೊಂದಿಗೆ ಮಾತುಕತೆ ನಡೆಸಲು ಸಮಿತಿ ಸಿದ್ಧವಾಗಿದೆ ಎಂದು ಶಹಾಬುದ್ದೀನ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X