ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನಿಗೀಗ ಇ-ಹುಂಡಿ

By Staff
|
Google Oneindia Kannada News

ತಿರುಪತಿ : ವಿಶ್ವದ ಅತ್ಯಂತ ಶ್ರೀಮಂತ ದೇವರಾದ ವೆಂಕಟೇಶ್ವರ ದೇಗುಲದಲ್ಲಿ ಇ-ಹುಂಡಿ ಸೌಲಭ್ಯವನ್ನು ತಿರುಮಲ- ತಿರುಪತಿ ದೇವಸ್ಥಾನ ಮಂಡಳಿ(ಟಿಟಿಡಿ) ಕಲ್ಪಿಸುತ್ತಿದ್ದು , ಇದರಿಂದಾಗಿ ವಿಶ್ವಾದ್ಯಂತ ನೆಲೆಸಿರುವ ವೆಂಕಟೇಶ್ವರನ ಭಕ್ತರು ತಮ್ಮ ಕಾಣಿಕೆಯನ್ನು ಇರುವ ಸ್ಥಳದಿಂದಲೇ ತಿಮ್ಮಪ್ಪನ ಹುಂಡಿಗೆ ಅರ್ಪಿಸಬಹುದಾಗಿದೆ.

ಇ-ಹುಂಡಿ ಸೌಲಭ್ಯವನ್ನು ಕಲ್ಪಿಸುವ ಕುರಿತು ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಕ್ತರು ತಮ್ಮ ಕಾಣಿಕೆಯನ್ನು ಇ-ಹುಂಡಿಯ ಮೂಲಕವೇ ಸಲ್ಲಿಸಬಹುದಾಗಿದೆ ಎಂದು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ।ಕೆ. ಕೃಷ್ಣಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವೆಂಕಟೇಶ್ವರ ಸ್ವಾಮಿಯ ಚಿನ್ನದ ಕೆತ್ತನೆಯ ಆನಂದ ನಿಲಯ ವಿಮಾನಂ ಚಿತ್ರ ಹೊಂದಿರುವ 15 ರುಪಾಯಿ ಮುಖಬೆಲೆಯ ಅಂಚೆ ಚೀಟಿಯ ಬಿಡುಗಡೆಗೆ ಸಂಬಂಧಿಸಿದ ಚೌಕಟ್ಟು ಸ್ಪಷ್ಟವಾಗಿದ್ದು , ಮುಂದಿನ ವಾರ ಹೈದರಾಬಾದ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಈ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಕೃಷ್ಣಯ್ಯ ಹೇಳಿದರು.

ಬೇಸಗೆ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಅವರಿಗೆ ಅನುಕೂಲಗಳನ್ನು ಕಲ್ಪಿಸಲು 6 ಹೆಚ್ಚುವರಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗುವುದು. ಇದರಲ್ಲಿ ನಾಲ್ಕು ಕೌಂಟರುಗಳು ತಿರುಮಲದಲ್ಲಿ ಈಗಾಗಲೇ ಕಾರ್ಯ ನಿರತವಾಗಿವೆ. ಸ್ವಾಮಿಯ ಮುಖ್ಯ ಸೇವಾ ಪೂಜೆಗಳನ್ನು ತಿರುಪತಿ ರೈಲ್ವೆ ನಿಲ್ದಾಣದಲ್ಲಿ ಟೀವಿ ಮೂಲಕ ಬಿತ್ತರಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ. ಸೇವೆಗಳ ಕುರಿತ ಮಾಹಿತಿಗಳನ್ನೂ ಪ್ರಸಾರ ಮಾಡಲಾಗುವುದು ಎಂದು ಕೃಷ್ಣಯ್ಯ ಹೇಳಿದರು.

(ಏಜೆನ್ಸೀಸ್‌)

ವೆಂಕಟೇಶ್ವರ ಮಹಾತ್ಮೆ ..
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X