ಬರೋಡಾವನ್ನು 277 ರನ್ನುಗಳಿಂದ ಹತ್ತಿಕ್ಕಿದ ರೈಲ್ವೇಸ್ ದೇಶೀ ಕ್ರಿಕೆಟ್ ದೊರೆ
ನವದೆಹಲಿ : ಇಲ್ಲಿ ನಡೆಯುತ್ತಿದ್ದ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ಸ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಬರೋಡಾ ತಂಡವನ್ನು 277 ರನ್ಗಳಿಂದ ಸೋಲಿಸಿದ ರೈಲ್ವೇಸ್ ತಂಡ ಚೊಚ್ಚಿಲ ರಣಜಿ ಟ್ರೋಫಿ ಪ್ರಶಸ್ತಿ ಪಡೆಯಿತು. ಇದರೊಂದಿಗೆ ಒಂದು ವರ್ಷ ಕಾಲ ದೇಶದ ಅಗ್ರಮಾನ್ಯ ತಂಡವೆಂಬ ಅಗ್ಗಳಿಕೆಗೆ ರೈಲ್ವೇಸ್ ಪಾತ್ರವಾಯಿತು.
ರೈಲ್ವೇಸ್ ಒಡ್ಡಿದ 391 ರನ್ಗಳ ಬೃಹತ್ ಸವಾಲನ್ನು ಬೆನ್ನಟ್ಟಿದ ಬರೋಡ ತಂಡ, ಶನಿವಾರದ ಆಟದಲ್ಲಿ 113 ರನ್ಗಳಿಗೆ ಎಲ್ಲ ವಿಕೆಟ್ಗಳನ್ನು ಕಳೆದುಕೊಳ್ಳುವುದರೊಂದಿಗೆ, ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅದರ ಕನಸು ಭಗ್ನವಾಯಿತು. ರೈಲ್ವೇಸ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಮುರಳಿ ಕಾರ್ತೀಕ್, ಫರೀದಾ ಹಾಗೂ ಹುಸೇನ್ ತಲಾ ಮೂರು ವಿಕೆಟ್ ಪಡೆದರು. 59 ರನ್ ಚಚ್ಚಿದ ಅತುಲ್ ಬೆಡಾಡೆ ಹೊರತು ಪಡಿಸಿ, ಬರೋಡಾದ ಉಳಿದ ಬ್ಯಾಟ್ಸ್ಮನ್ಗಳು ನಿಂತು ಆಡುವ ಧೈರ್ಯ ತೋರಲೇ ಇಲ್ಲ .
ಇದಕ್ಕೂ ಮುನ್ನ ರೈಲ್ವೇಸ್ ತನ್ನ ಎರಡನೇ ಇನಿಂಗ್ಸ್ನಲ್ಲಿ ಮುರಳಿ ಕಾರ್ತೀಕ್(69) ಹಾಗೂ ಯರೇಗೌಡ(66) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 306 ರನ್ಗಳನ್ನು ಗಳಿಸಿತ್ತು . ಮೊದಲ ಇನಿಂಗ್ಸ್ನಲ್ಲಿ 84 ರನ್ಗಳ ಮುನ್ನಡೆ ಪಡೆದಿದ್ದ ರೈಲ್ವೇಸ್ ಬರೋಡಾಕ್ಕೆ 391 ರನ್ಗಳ ಸವಾಲು ಒಡ್ಡಿತ್ತು .
ತನ್ನ ಪ್ರಮುಖ ಆರಂಭಿಕ ಆಟಗಾರ ಸಂಜಯ್ ಬಾಂಗ್ರಾ ಅವರ ಅನುಪಸ್ಥಿತಿಯಲ್ಲೂ ರಣಜಿ ಟ್ರೋಫಿ ಗೆದ್ದಿರುವ ಮಹತ್ವದ ಸಾಧನೆ ರೈಲ್ವೇಸ್ ತಂಡದ್ದಾಗಿದೆ.
ಸ್ಕೋರ್
ವಿವರ
:
ರೈಲ್ವೇಸ್-
253
ಹಾಗೂ
306
ಬರೋಡಾ-
169
ಹಾಗೂ
114
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...