ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗಲೇ ದೇವಸ್ಥಾನ ಬೇಡ-ವಾಜಪೇಯಿ, ಪಟ್ಟು ಬಿಡುವುದಿಲ್ಲ-ಕಂಚಿ ಸ್ವಾಮೀಜಿ

By Staff
|
Google Oneindia Kannada News

Kanchi shaankaracharya, Jayendra Saraswatiನವದೆಹಲಿ : ಕಂಚಿ ಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿ ಸ್ವಾಮಿಯಾಡನೆ ಕೇಂದ್ರ ಸರ್ಕಾರ ಮಾತುಕತೆ ಮುಂದುವರೆಸಿದ್ದು, ಮಂಗಳವಾರ ರಕ್ಷಣಾ ಸಚಿವ ಹಾಗೂ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟದ ಸಂಚಾಲಕ ಜಾರ್ಜ್‌ ಫರ್ನಾಂಡಿಸ್‌ ಸ್ವಾಮೀಜಿ ಮನವೊಲಿಸಲು ಮರಳಿ ಯತ್ನ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಹಿಡಿದಿರುವ ಹಟ ಬಿಡುವಂತೆ ಕೇಂದ್ರ ಸರ್ಕಾರ ಸ್ವಾಮೀಜಿಯನ್ನು ಕೋರುತ್ತಿದೆ. ಆದರೆ ಸ್ವಾಮೀಜಿ ಪಟ್ಟು ಸಡಿಲಿಸುತ್ತಿಲ್ಲ.

ಸೋಮವಾರ ರಾತ್ರಿ ದಕ್ಷಿಣ ದೆಹಲಿಯ ಕಾಮಾಕ್ಷಿ ಮಂದಿರದಲ್ಲಿ ಜಯೇಂದ್ರ ಸರಸ್ವತಿ ಸ್ವಾಮಿ ಜೊತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಮುರಳಿ ಮನೋಹರ್‌ ಜೋಷಿ ಸುಮಾರು ಅರ್ಧ ತಾಸಿನ ಕಾಲ ಮಾತುಕತೆ ನಡೆಸಿರುವ ವರದಿಯಾಗಿದೆ.

ತಾವು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜೊತೆ ಈಗಾಗಲೇ ನಡೆಸಿದ ಮಾತುಕತೆಯ ಫಲಶೃತಿಯನ್ನು ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ಅವರಿಗೆ ಕಂಚಿ ಸ್ವಾಮೀಜಿ ಹೇಳಿದ್ದಾರೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಪ್ರಧಾನಿ ವಾಜಪೇಯಿ ಜೊತೆ ಸ್ವಾಮೀಜಿ ಒಂದೂವರೆ ತಾಸು ಕಾಲ ಮಾತುಕತೆ ನಡೆಸಿದ್ದು, ಮಾರ್ಚ್‌ 15ನೇ ತಾರೀಖು ಮಧ್ಯಾಹ್ನ 2.15 ಗಂಟೆಗೆ ಕೆತ್ತನೆ ಮಾಡಿರುವ ಕಂಬಗಳನ್ನು ದೇವಾಲಯ ನಿರ್ಮಿಸಬೇಕೆಂದಿರುವ ಸ್ಥಳಕ್ಕೆ ತಂದೇ ತರುವುದಾಗಿ ಪಟ್ಟು ಹಿಡಿದಿದ್ದಾರೆ. ಈ ಹಟ ಬಿಟ್ಟು, ದೇವಸ್ಥಾನ ನಿರ್ಮಾಣ ಕಾರ್ಯವನ್ನು ಮುಂದೂಡುವಂತೆ ಮನವೊಲಿಸುವ ಪ್ರಧಾನಿ ವಾಜಪೇಯಿ ಯತ್ನ ವಿಫಲವಾಗಿದೆ.

ಇನ್ನು 3 ತಿಂಗಳಲ್ಲಿ ದೇವಸ್ಥಾನ ಕಟ್ಟುವುದು ಶತಸಿದ್ಧ ಎಂದು ಕಂಚಿ ಸ್ವಾಮೀಜಿ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಈ ನಡುವೆ, ಹಿಂದೂ ಧಾರ್ಮಿಕ ಮುಖಂಡರು ಹಾಗೂ ವಿಹೆಚ್‌ಪಿ ನಾಯಕರು, ಪ್ರಧಾನಿ ಹಾಗೂ ಕಂಚಿ ಸ್ವಾಮೀಜಿ ಮಾತುಕತೆಯ ಬಗೆಗೆ ವಿಹೆಚ್‌ಪಿ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X