ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಹಂತಕ ವೀರಪ್ಪನ್‌ನ ಪತ್ನಿ ಮುತ್ತುಲಕ್ಷ್ಮಿ ಹಾಗೂ ಆಕೆಯ ಸಂಬಂಧಿಕರ ಬಂಧನ

By Staff
|
Google Oneindia Kannada News

ಮೈಸೂರು:Muttulakshmi ನರಹಂತಕ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿಯನ್ನು ರಾಜ್ಯ ವಿಶೇಷ ಪೊಲೀಸ್‌ ಪಡೆ ಬಂಧಿಸಿರುವುದಾಗಿ ವರದಿಯಾಗಿದೆ.

ರಾಜ್‌ಕುಮಾರ್‌ ಬಂಧನದ ಬಗ್ಗೆ ತಿಳಿದಿದ್ದೂ ಆ ಬಗ್ಗೆ ಉಪೇಕ್ಷೆ ತೋರಿದ್ದಾರೆ ಎಂಬ ಆರೋಪದ ಮೇಲೆ ಇನ್ನೂ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮುತ್ತು ಲಕ್ಷ್ಮಿಯ ತಂದೆ ಐಯ್ಯನ್‌ ಪೂಜಾರಿ, ಸಹೋದರ ಸಂಗೋಪಾಲನ್‌ಮತ್ತು ಸಂಬಂಧಿಕರಾದ ಪಚೆಮುತ್ತು , ರಾಜ ಮಾರನ್‌ ಮತ್ತು ಮುತ್ತುಕುಮಾರ್‌ ಬಂಧಿತರು ಎಂದು ಪೊಲೀಸ್‌ ವರದಿಯನ್ನುಲ್ಲೇಖಿಸಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ರಾಜ್‌ ಕುಮಾರ್‌ ಅಪಹರಣ ಪ್ರಕರಣದ ನಂತರ ಚುರುಕುಗೊಂಡ ವೀರಪ್ಪನ್‌ ಬೇಟೆಯಲ್ಲಿ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿಯ ಬಂಧನ ಪ್ರಮುಖ ಹೆಜ್ಜೆಯಾಗಿದ್ದು, ಬಂಧಿತರಾದ ಆರೂ ಮಂದಿಯನ್ನು 15 ದಿನಗಳ ವರೆಗೆ ನ್ಯಾಯಾಂಗ ಕಸ್ಟಡಿಯಲ್ಲಿ ಇರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X