ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರಸೇವಕರಿದ್ದ ರೈಲಿಗೆ ದುಷ್ಕರ್ಮಿಗಳಿಂದ ಬೆಂಕಿ : ಕನಿಷ್ಠ 6 ಸಾವು
ಅಹ್ಮದಾಬಾದ್: ಫೈಜಾಬಾದ್ನಿಂದ ಅಯೋಧ್ಯೆ ಮಾರ್ಗವಾಗಿ ಬರುತ್ತಿದ್ದ ಸಬರ್ಮತಿ ಎಕ್ಸ್ಪ್ರೆಸ್ ರೈಲು ಗಾಡಿಯ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ಮಾಡಿದ ದಾಳಿಯಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಇತರ 18 ಮಂದಿ ಗಾಯಗೊಂಡಿದ್ದಾರೆ.
ಗುಜರಾತ್ನ ಗೋದ್ರಾ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಈ ದಾಳಿ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ನಾಲ್ಕು ರೈಲು ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮವಾಗಿ ಇಷ್ಟು ಭಾರೀ ದುರಂತ ಸಂಭವಿಸಿದೆ. ಈ ಬೋಗಿಗಳಲ್ಲಿ ಕೆಲವು ರಾಮ ಸೇವಕರು (ಕರಸೇವಕರು) ಘೋಷಣೆಗಳನ್ನು ಕೂಗುತ್ತಾ, ರಾಮಭಜನೆ ಮಾಡುತ್ತಾ ಪ್ರಯಾಣ ಮಾಡುತ್ತಿದ್ದರು.
ಬುಧವಾರ ಬೆಳಗ್ಗೆ ಸುಮಾರು 8-30ರ ಸಮಯದಲ್ಲಿ ಈ ದಾಳಿ ನಡೆದಿದ್ದು, ಗೋದ್ರಾ ಪಟ್ಟಣದಲ್ಲಿ ಕರ್ಫ್ಯೂ ಹೇರಲಾಗಿದೆ.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, February 27, 2002, 5:30 [IST]