ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಚಂದ್ರಾಪುರ ಮಠದ ಮೂಲಸ್ಥಾನ ಅಶೋಕದ ಅಭಿವೃದ್ಧಿಗೆ ಯೋಜನೆ

By Staff
|
Google Oneindia Kannada News

ಪುತ್ತೂರು : ಶತಶೃಂಗಪುರವೆಂದೇ ಪ್ರಸಿದ್ಧಿ ಪಡೆದಿರುವ ರಾಮಚಂದ್ರಾಪುರ ಮಠದ ಮೂಲಸ್ಥಳ ಗೋಕರ್ಣ ಸಮೀಪದ ಅಶೋಕ ಎಂಬಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಠದ ಯತಿ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.

ಆದಿ ಶಂಕರಾಚಾರ್ಯರು ಸನ್ಯಾಸ ದೀಕ್ಷೆ ಪಡೆದ ಈ ಜಾಗದಲ್ಲಿ , ಶಂಕರಾಚಾರ್ಯರ ನಂತರ 11 ಮಂದಿ ಯತಿಗಳು ಜೀವನ ಸಾಗಿಸಿದ್ದಾರೆ. ಬಳಿಕ ಕಾರಣಾಂತರದಿಂದ ಮಠವನ್ನು ಹೊಸನಗರದ ರಾಮಚಂದ್ರಾಪುರಕ್ಕೆ ಸ್ಥಳಾಂತರಿಸಲಾಯಿತು. ಅಂತಹ ಪವಿತ್ರ ಮೂಲ ಸ್ಥಾನವನ್ನು ಈಗ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ .

ಅಶೋಕದಲ್ಲಿ ರಘೋತ್ತಮ ಮೂಲ ಮಠದ ಕುರುಹುಗಳು ಪತ್ತೆಯಾಗಿದ್ದು, ಬೃಂದಾವನಸ್ಥರಾಗಿದ್ದ ಯತಿಗಳ ಸಮಾಧಿಯೂ ದೊರೆತಿದೆ. ಅಲ್ಲದೆ ಅಲ್ಲಿನ ಜನರು ಅಶೋಕವನ್ನು ಮಠದ ಹಿತ್ತಿಲು ಎಂದೇ ಪರಿಗಣಿಸುತ್ತಾರೆ. ಅಶೋಕದ ಅಭಿವೃದ್ಧಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ಮಠದ ಆಡಳಿತ ಮಂಡಳಿ, ಸದ್ಯದಲ್ಲಿಯೇ ಸಿದ್ಧಪಡಿಸಲಿದೆ ಎಂದು ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X