ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಚಂದ್ರಾಪುರ ಮಠದ ಮೂಲಸ್ಥಾನ ಅಶೋಕದ ಅಭಿವೃದ್ಧಿಗೆ ಯೋಜನೆ
ಪುತ್ತೂರು : ಶತಶೃಂಗಪುರವೆಂದೇ ಪ್ರಸಿದ್ಧಿ ಪಡೆದಿರುವ ರಾಮಚಂದ್ರಾಪುರ ಮಠದ ಮೂಲಸ್ಥಳ ಗೋಕರ್ಣ ಸಮೀಪದ ಅಶೋಕ ಎಂಬಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಠದ ಯತಿ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಆದಿ ಶಂಕರಾಚಾರ್ಯರು ಸನ್ಯಾಸ ದೀಕ್ಷೆ ಪಡೆದ ಈ ಜಾಗದಲ್ಲಿ , ಶಂಕರಾಚಾರ್ಯರ ನಂತರ 11 ಮಂದಿ ಯತಿಗಳು ಜೀವನ ಸಾಗಿಸಿದ್ದಾರೆ. ಬಳಿಕ ಕಾರಣಾಂತರದಿಂದ ಮಠವನ್ನು ಹೊಸನಗರದ ರಾಮಚಂದ್ರಾಪುರಕ್ಕೆ ಸ್ಥಳಾಂತರಿಸಲಾಯಿತು. ಅಂತಹ ಪವಿತ್ರ ಮೂಲ ಸ್ಥಾನವನ್ನು ಈಗ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, February 27, 2002, 5:30 [IST]