ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜಾಜಿನಗರ: ಅಗ್ನಿ ಆಕಸ್ಮಿಕದಲ್ಲಿ ಲಕ್ಷಾಂತರ ರು. ಪೀಠೋಪಕರಣ ಭಸ್ಮ
ಬೆಂಗಳೂರು : ರಾಜಾಜಿನಗರದ ಪೀಠೋಪಕರಣ ಹಾಗೂ ದಾಸ್ತಾನು ಸಂಗ್ರಹ ಮಳಿಗೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.
ಪ್ರಾರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಆನಂತರ ಇಡೀ ಮಳಿಗೆಗೆ ವ್ಯಾಪಿಸಿತು. ಈ ಅಗ್ನಿ ಆಕಸ್ಮಿಕದಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಪೀಠೋಪಕರಣಗಳು ಸುಟ್ಟುಹೋಗಿವೆ. ನಷ್ಟದ ನಿಖರ ಅಂದಾಜು ಇನ್ನೂ ಸಾಧ್ಯವಾಗಿಲ್ಲ . ಬೆಂಕಿ ಹತ್ತಿಕೊಳ್ಳಲು ಕಾರಣವೂ ತಿಳಿದುಬಂದಿಲ್ಲ .
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಆ ವೇಳೆಗಾಗಲೇ ಅಪಾರ ಹಾನಿ ಸಂಭವಿಸಿತ್ತು . ಬೆಂಕಿ ಆಕಸ್ಮಿಕ ಬೆಳಗ್ಗೆ ಹೊತ್ತು ಸಂಭವಿಸಿರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ . ಮಧ್ಯಾಹ್ನದ ಸುಡು ಬಿಸಿಲು ಹಾಗೂ ಗಾಳಿ ಸೇರಿಕೊಂಡಿದ್ದರೆ ಹಾನಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿತ್ತು .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, February 26, 2002, 5:30 [IST]