ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಒಂದು ಸಾಕು, ಎರಡಕ್ಕೆ ಬ್ರೇಕು’ ನೀತಿ ಜಾರಿಗೆ ಸರ್ಕಾರದ ಚಿಂತನೆ
ನವದೆಹಲಿ : ನಾಗಾಲೋಟದಲ್ಲಿ ಬೆಳೆಯುತ್ತಿರುವ ದೇಶದ ಜನಸಂಖ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ‘ಗರಿಷ್ಠ ಎರಡು ಮಕ್ಕಳು’ ಎನ್ನುವ ನೀತಿಯನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
‘ಜನಸಂಖ್ಯೆ ನಿಯಂತ್ರಣಕ್ಕೆ ಹೆರಿಗೆ ಮತ್ತು ಶಿಶು ಆರೋಗ್ಯ ಪ್ರಮುಖ ಅಂಶ’ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಸಿ.ಪಿ.ಠಾಕೂರ್ ಈ ವಿಷಯ ತಿಳಿಸಿದರು.
ಅಕ್ರಮ ಗರ್ಭಪಾತಗಳಿಗೆ ಕಡಿವಾಣ ಹಾಕಲು ಎಂಟಿಪಿ ಕಾಯ್ದೆಗೆ ತಿದ್ದುಪಡಿ ತರಲು ಕೆಲವು ದಿನಗಳ ಹಿಂದೆ ಸರ್ಕಾರ ನಿರ್ಧರಿಸಿದೆ. ಅಂತೆಯೇ ಜನನಪೂರ್ವ ಲಿಂಗ ಪರೀಕ್ಷೆ ತಂತ್ರಜ್ಞಾನ ಕಾಯ್ದೆ ತಿದ್ದುಪಡಿಗೂ ಸರ್ಕಾರ ಮುಂದಾಗಿದ್ದು , ಈ ಕುರಿತ ಮಸೂದೆಯನ್ನು ಪ್ರಸಕ್ತ ಅಧಿವೇಶನದಲ್ಲಿ ಸಂಸತ್ತಿನ ಮುಂದಿಡಲಾಗುವುದು ಎಂದು ಠಾಕೂರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, February 26, 2002, 5:30 [IST]