ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು ವಿ.ವಿ. ಡಾ.ಎಂ.ಜಯಾನಂದರಿಗೆ ರಾಷ್ಟ್ರೀಯ ಖನಿಜ ಪ್ರಶಸ್ತಿ
ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾಲಯದ ಭೂಗರ್ಭಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಎಂ.ಜಯಾನಂದ ಅವರಿಗೆ ಕೇಂದ್ರ ಕಲ್ಲಿದ್ದಲು ಸಚಿವಾಲಯದ ಪ್ರತಿಷ್ಠಿತ ರಾಷ್ಟ್ರೀಯ ಖನಿಜ ಪ್ರಶಸ್ತಿ ದೊರೆತಿದೆ.
ಭೂಗರ್ಭ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಜಯಾನಂದ ಅವರು ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ ಅವರನ್ನು ರಾಷ್ಟ್ರೀಯ ಖನಿಜ ಪ್ರಶಸ್ತಿ -2000 ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಜಯಾನಂದ ಅವರ 30 ಕ್ಕೂ ಹೆಚ್ಚು ಸಂಶೋಧನಾ ವರದಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗಿವೆ.
ಈಗಾಗಲೇ ಜಯಾನಂದ ಅವರು ತಮ್ಮ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ರಾಜ್ಯ ಸರ್ಕಾರದ ಸಿ.ವಿ.ರಾಮನ್ ಪ್ರಶಸ್ತಿ ಹಾಗೂ ಎಂ.ಆರ್.ಶ್ರೀನಿವಾಸರಾವ್ ಪ್ರಶಸ್ತಿ ಅವರ ಸಾಧನೆಗೆ ಸಂದಿರುವ ಇತರ ಪ್ರಮುಖ ಗೌರವಗಳು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, February 26, 2002, 5:30 [IST]