ಗದಗದಲ್ಲಿ ಫೆ.23 ರಂದು ಬಂಜಾರ ಜನಾಂಗದ ಮೊದಲ ಸಮ್ಮೇಳನ
ಗದಗ : ಬಂಜಾರ ಜನಾಂಗದ ಮೊಟ್ಟ ಮೊದಲ ಸಮ್ಮೇಳನಕ್ಕೆ ಗದಗ ಶಹರ ಸಜ್ಜಾಗಿದೆ. ಫೆಬ್ರವರಿ ತಿಂಗಳ 23 ರ ಶನಿವಾರ ಬಂಜಾರ ಸಮುದಾಯದ ಸಮ್ಮೇಳನ ನಡೆಯಲಿದೆ.
ಸುಮಾರು 10 ಸಾವಿರ ಮಂದಿ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಮ್ಮೇಳನದ ಬಗೆಗೆ ಗುರುವಾರ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಗದಗ ಜಿಲ್ಲೆಯ ಬಂಜಾರ ಲಂಬಾಣಿ ವೇದಿಕೆಯ ಅಧ್ಯಕ್ಷ ಭೀಮ್ಸಿಂಗ್ ರಾಥೋಡ್ ತಿಳಿಸಿದರು. ಸಮ್ಮೇಳನದ ಸಂದರ್ಭದಲ್ಲಿ, ಹಣಕಾಸು ಸಂಸ್ಥೆಯಾಂದನ್ನು ಪ್ರಾರಂಭಿಸಲಾಗುವುದು ಹಾಗೂ ಶ್ರೀ ಸೇವಾಲಾಲ್ ಅವರ 263 ನೇ ಜಯಂತಿಯನ್ನು ಆಚರಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಸಮ್ಮೇಳನವನ್ನು ಉದ್ಘಾಟಿಸುವರು. ಗದಗ ಶಾಸಕ ಡಿ.ಆರ್.ಪಾಟೀಲ್ ಸಮಾವೇಶದ ಅಧ್ಯಕ್ಷತೆ ವಹಿಸುವರು. ಸಂಸದರಾದ ಎಚ್.ಜಿ.ರಾಮುಲು, ಐ.ಜಿ.ಸನದಿ, ಆರ್.ಎಸ್.ಪಾಟೀಲ್, ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್, ಎಂ.ಶಂಕರ್ ಮತ್ತು ಶಾಸಕರಾದ ಎಸ್.ಎಸ್.ಪಾಟೀಲ್, ಬಿ.ಆರ್.ಯಾವಗಲ್ ಸಮಾವೇಶದಲ್ಲಿ ಹಾಜರಿರುತ್ತಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...