ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನಕಪುರ ಚುನಾವಣೆ: ಗೆಲುವು ಶತಸಿದ್ಧ, ದಳ ಛಿದ್ರ ಛಿದ್ರ- ಈಶ್ವರಪ್ಪ
ಬೆಂಗಳೂರು: ಕನಕಪುರ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ಕನಕಪುರ ಚುನಾವಣೆಯ ಬಿಜೆಪಿ ಸ್ಪರ್ಧಿ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ನಂತರ ಜನತಾದಳ ಉಳಿಯಾಲ್ಲ , ಛಿದ್ರ ಛಿದ್ರವಾಗಲಿದೆ ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಭವಿಷ್ಯ ನುಡಿದರು. ಸಿಂಧ್ಯಾ, ಸಿದ್ಧರಾಮಯ್ಯ ಯಾರ ದಳವೂ ಉಳಿಯಾಲ್ಲ . ಕನಕಪುರ ಕ್ಷೇತ್ರದ ಮತದಾರರು ಇವರ ಸಮಯ ಸಾಧಕ ರಾಜಕೀಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.
ಚುನಾವಣೆಯ ಫಲಿತಾಂಶ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಇಂಗಿತ ವ್ಯಕ್ತಪಡಿಸಿದ ಈಶ್ವರಪ್ಪ , ಚುನಾವಣೆಯಲ್ಲಿ ತಾವು ಗೆಲ್ಲುವುದು ಶತಸಿದ್ಧ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ
Comments
Story first published: Sunday, February 17, 2002, 5:30 [IST]