ರಾಜೇಂದ್ರ ಸಿಂಗ್ ಬಾಬು ಸೇರಿದಂತೆ 6ಮಂದಿಗೆ ಸಂದೇಶ ಪ್ರಶಸ್ತಿ
ಮಂಗಳೂರು : ಇಲ್ಲಿನ ಸಂದೇಶ ಕಲಾ ಪ್ರತಿಷ್ಠಾನವು, ವಾರ್ಷಿಕ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರವರಿ 16ರಂದು ಆಯೋಜಿಸಿದ್ದು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದೆ.
ಕನ್ನಡ ಸಾಹಿತ್ಯ ಕ್ಷೇತ್ರದಿಂದ ಎಚ್. ಎಲ್. ನಾಗೇಗೌಡ, ಕೊಂಕಣಿ ಸಾಹಿತ್ಯ ಕ್ಷೇತ್ರದಿಂದ ಮೈಸೂರಿನ ಜೆ.ಸಿ. ವೇಗಸ್ , ತುಳು ಸಾಹಿತ್ಯ ಕ್ಷೇತ್ರದಿಂದ ಉಡುಪಿಯ ಡಾ. ಯು.ಪಿ. ಉಪಾಧ್ಯಾಯ, ಕಲಾ ಕ್ಷೇತ್ರದಿಂದ ಹುಬ್ಬಳ್ಳಿಯ ಲಿಂಗರಾಜ ಗವಾಯಿ ಹಿರೇ ಮಠ, ಪತ್ರಿಕೋದ್ಯಮ ಕ್ಷೇತ್ರದಿಂದ, ಮಣಿಪಾಲದ ಈಶ್ವರಯ್ಯ ಹಾಗೂ ಸಿನೆಮಾ ಕ್ಷೇತ್ರದಿಂದ ರಾಜೇಂದ್ರ ಸಿಂಗ್ ಬಾಬು ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ಸಂದೇಶ ಪ್ರತಿಷ್ಠಾನ ಮಂಗಳವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸುತ್ತಾರೆ. ಮಂಗಳೂರಿನ ಬಿಷಪ್ ರೆ। ಡಾ. ಅಲೋಷಯಸ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...