ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕೂಟರ್‌ ಚಾಲನೆ,ದರ್ಗಾದಲ್ಲಿ ಪ್ರಾರ್ಥನೆ, ದೇವೇಗೌಡರ ನಿಂದನೆ...

By Staff
|
Google Oneindia Kannada News

ಚನ್ನ ಪಟ್ಟಣ: ಕನಕಪುರ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ತುರುಸಿನ ಸ್ಪರ್ಧೆ ಒಡ್ಡಿರುವ ಸಹಕಾರ ಸಚಿವ ಡಿ.ಕೆ.ಶಿವಕುಮಾರ್‌ ಶನಿವಾರ ಚನ್ನಪಟ್ಟಣದಲ್ಲಿ ಸ್ಕೂಟರ್‌ ಓಡಿಸಿದರು.

ಚುನಾವಣಾ ಪ್ರಚಾರದ ಅಂಗವಾಗಿ ಏರ್ಪಡಿಸಿದ್ದ ಸ್ಕೂಟರ್‌ ರ್ಯಾಲಿಯಲ್ಲಿ ನೂರಾರು ಸ್ಕೂಟರ್‌ಗಳು ಭಾಗವಹಿಸಿದ್ದವು. ಸ್ವತಃ ಶಿವಕುಮಾರ್‌ ಸ್ಕೂಟರ್‌ ಏರಿ ರ್ಯಾಲಿಯ ನೇತೃತ್ವ ವಹಿಸಿದಾಗ, ಸವಾರರಲ್ಲಿ ಹುರುಪು. ಕೆಂಗಲ್‌ ಬಳಿಯಿಂದ ಆರಂಭವಾದ ರ್ಯಾಲಿ, ಆನಂತರ ಪಟ್ಟಣ ತಲುಪಿತು. ಕೆಲವು ಸ್ಕೂಟರ್‌ ಡಿಕ್ಕಿ ಹೊಡೆದು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾದವು.

ಚನ್ನಪಟ್ಟಣಕ್ಕೆ ಆಗಮಿಸಿದ ಶಿವಕುಮಾರ್‌ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಆನಂತರ ಬಸ್‌ ನಿಲ್ದಾಣದಲ್ಲಿ ಚುನಾವಣಾ ಪ್ರಚಾರ ಭಾಷಣ- ದೇವೇಗೌಡರ ಕುಟುಂಬ ಪ್ರೇಮದ ಕುರಿತು ಹಿಗ್ಗಾಮುಗ್ಗಾ ಟೀಕೆ. ಶಿವಕುಮಾರ್‌ ಜೊತೆಯಲ್ಲಿ , ಸಚಿವ ರೋಷನ್‌ಬೇಗ್‌, ಶಾಸಕ ಸಿ.ಪಿ.ಯೋಗೇಶ್ವರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಕಾಂತ್‌, ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ ಕೃಷ್ಣಪ್ಪ ಇದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X