ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಆರ್ಥಿಕ ಸ್ಥಿತಿ ಮ್ಯಾನೇಜಬಲ್‌ ಅಂತಾರೆ ಎಸ್‌.ಎಂ. ಕೃಷ್ಣ

By Staff
|
Google Oneindia Kannada News

ಬೆಂಗಳೂರು : ಈ ಹೊತ್ತು ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹೇಗಿದೆ? ಅತ್ಯುತ್ತಮವಾಗಿದೆಯೇ? ಉತ್ತಮವಾಗಿದೆಯೇ? ಸಾಧಾರಣವಾಗಿದೆಯೇ ಇಲ್ಲ ಸಂಪೂರ್ಣ ಹದಗೆಟ್ಟಿದೆಯೇ? ಪ್ರತಿಪಕ್ಷಗಳ ಮಾತಲ್ಲಿ ಹೇಳುವುದಾದರೆ ಹದಗೆಟ್ಟಿದೆ. ಆದರೆ, ಕೃಷ್ಣ ಇದನ್ನು ಅಲ್ಲಗಳೆಯುತ್ತಾರೆ.

ಆದರೆ, ರಾಜ್ಯದ ಹಣಕಾಸು ಪರಿಸ್ಥಿತಿ ಅತ್ಯುತ್ತಮವಾಗಿದೆ ಎಂದೇನೂ ಅವರು ಕಮಿಟ್‌ ಆಗಿಲ್ಲ. ‘ಇಟ್‌ ಈಸ್‌ ಮ್ಯಾನೇಜಬಲ್‌’ ಎಂದಷ್ಟೇ ಉತ್ತರ ಕೊಟ್ಟಿದ್ದಾರೆ. ನೆರೆಯ ಕೇರಳ ರಾಜ್ಯವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಸ್ಥಿತಿ ನಿರ್ವಹಣಾತ್ಮಕವಾಗಿದೆ ಎಂದು ಹೇಳಿದರು.

ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ಜನತೆಗೆ ಪರಿಹಾರ ನೀಡುವ ಬಗ್ಗೆ ಸರಕಾರ ಚಿಂತಿಸುತ್ತಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಕಂದಾಯ ಇಲಾಖೆ ಆಯುಕ್ತರು, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ವರದಿ ಸಲ್ಲಿಸುತ್ತಾರೆ. ಆ ವರದಿಯ ಮೇಲೆ ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಕೃಷ್ಣ ಉತ್ತರಿಸಿದರು.

ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಕರ್ನಾಟಕದ ಖಜಾನೆಯಲ್ಲಿ ದುಡ್ಡಿಲ್ಲ , ಆದರೆ ಕೃಷ್ಣ ಮಾತ್ರ ರಾಷ್ಟ್ರದ ನಂ.1 ಮುಖ್ಯಮಂತ್ರಿ ಎಂದು ಪ್ರತಿಪಕ್ಷ ನಾಯಕರು ಈಚೆಗೆ ಟೀಕಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

(ಇನ್‌ಫೋವಾರ್ತೆ /ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X