ಉತ್ತರಹಳ್ಳಿ ಕ್ಷೇತ್ರದ ಮತದಾರರಿಗೆ ಖುದ್ದು ಎಸ್.ಎಂ.ಕೃಷ್ಣ ಪತ್ರ ಬರೆದಿದ್ದಾರೆ
ಬೆಂಗಳೂರು : ಇಂಡಿಯಾ ಟುಡೇ ಸಮೀಕ್ಷೆಯಿಂದ ಭಾರತದ ಬೆಸ್ಟ್ ಚೀಫ್ ಮಿನಿಸ್ಟರ್ ಪಟ್ಟ ಗಿಟ್ಟಿಸಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕನಕಪುರ ಚುನಾವಣೆ ಪ್ರಚಾರದ ವಿಷಯದಲ್ಲಿ ಸಾಕಷ್ಟು ಸದ್ದು ಮಾಡದೇ ಇರೋದು ಯಾತಕ್ಕೆ? ದೇವೇಗೌಡರ ಖದರಿಗೆ ಗರಿ ಷರ್ಟಿನ ಕೃಷ್ಣ ಸುಮ್ಮಗೆ ನಗುತ್ತಿರುವುದರ ಹಿಂದಿನ ತಂತ್ರವೇನು?
ಕನಕಪುರ ಲೋಕಸಭಾ ಉಪ ಚುನಾವಣೆಗೆ ಇನ್ನು ಹನ್ನೆರಡೇ ದಿನ. ಜಾತಿ, ದೇವೇಗೌಡರ ‘ಇದು ನನ್ನ ಕೊನೇ ಯುದ್ಧವೆಂಬ ಸಿಂಪತಿ ವೋಟುಗಳ ಸೆಳೆವ ತಂತ್ರ’...ಇವೆಲ್ಲದರ ನಡುವೆಯೂ ಕೃಷ್ಣ ಕುಂದಿದ ಮೊಗವ ತೋರಿಸುತ್ತಲೇ ಇಲ್ಲ. ಎರಡು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದ ಸಿಎಂ ಆಗಿ ಜಗತ್ತಿನ ಕಣ್ಣನ್ನೇ ಸೆಳೆದಿರುವ ಕೃಷ್ಣ ಪ್ರಕಾರ ಉತ್ತರಹಳ್ಳಿ ಕ್ಷೇತ್ರದ ಮತದಾರರ ಮನವ ಹೊಗುವುದು ಮುಖ್ಯ. ಇದಕ್ಕಾಗೇ ಸದ್ದಿಲ್ಲದೆ ಹೊಸ ತಂತ್ರವೊಂದು ತಯಾರಾಗಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ತಂತ್ರವನ್ನು ಬಯಲಿಗೆಳೆದಿದೆ.
ಉತ್ತರಹಳ್ಳಿ ಕ್ಷೇತ್ರದ 12.39 ಲಕ್ಷ ಮತದಾರರ ಪ್ರತಿ ಮನೆಗೆ ಖುದ್ದು ಕೃಷ್ಣ ಕಾಗದ ಹಾಕಲಿದ್ದಾರೆ. ಬಹುತೇಕ ಕಾರ್ಪೊರೇಟ್ ಜಗತ್ತು ಇರುವ ಉತ್ತರಹಳ್ಳಿ ಕ್ಷೇತ್ರದ ಮತದಾರರಿಗೆ ತಮ್ಮ ಬಗೆಗೆ ಒಲವಿದೆ. ಅದನ್ನು ಉಳಿಸಿಕೊಂಡು, ಮತಗಳನ್ನು ಗಿಟ್ಟಿಸಿಕೊಳ್ಳಲೇಬೇಕು ಎಂಬುದು ಕೃಷ್ಣ ತಂತ್ರ.
ಹೀಗಿದೆ ಕೃಷ್ಣ ಪತ್ರ...
"Dear
friend,
It
has
not
been
possible
for
me
to
share
some
of
my
views
with
you.
With
your
support
two
years
ago
my
party
was
able
to
form
a
government.
We
have
brought
transparency
in
our
functioning.
We
have
won
accolades
from
world
leaders.
But
now
your
opinion
on
our
performance
is
essential.
No
matter
how
preoccupied
you
are
on
the
polling
day,
spare
some
time
to
cast
your
vote
in
favour
of
the
Congress
candidate."
(ಇನ್ಫೋ ವಾರ್ತೆ)
ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ