ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು ಕಾಫಿ ಬೆಟ್ಟದೊಡಲಿನ ಗರ್ಭದಲ್ಲಿ ಹುದುಗಿದೆ ಬಂಗಾರ

By Staff
|
Google Oneindia Kannada News

ಚಿಕ್ಕಮಗಳೂರು: ಕಾಫಿ ನಾಡಿನ ಮಣ್ಣಿನಲ್ಲಿ ಬಂಗಾರದ ಅಂಶವಿರುವುದನ್ನು ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಟಿ.ಎಂ. ಶಿವಶಂಕರ್‌ ಅವರ ನೇತೃತ್ವದ ತಂಡ ಚಿಕ್ಕಮಗಳೂರಿನ ಬೆಟ್ಟ ಪ್ರದೇಶದಲ್ಲಿ ಚಿನ್ನದ ಅಂಶವಿರುವುದಾಗಿ ವರದಿ ಮಾಡಿದೆ. ಇಲ್ಲಿನ ದಂತರಮಕ್ಕಿ ಮತ್ತು ಕಾರ್ತಿಕೆರೆಯ ಬೆಟ್ಟ ಪ್ರದೇಶದ ಒಂದು ಟನ್‌ ಮಣ್ಣಿನಿಂದ ಒಂದು ಗ್ರಾಂ ಚಿನ್ನ ಸಂಪಾದಿಸುವುದು ಸಾಧ್ಯ. ಇದು ಈಗ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ಚಿನ್ನದ ಗಣಿಗಿಂತ ಲಾಭದಾಯಕ ಉದ್ಯಮವಾಗಲಿದೆ.

ಲೋಹದ ಅದಿರುಗಳು ಇರುವ ಪ್ರದೇಶವನ್ನು ಪತ್ತೆ ಹಚ್ಚಲು ಆಸ್ಟ್ರೇಲಿಯಾದ ಗ್ರೀನ್‌ಲ್ಯಾಂಡ್‌ ಎಂಬ ಸಂಸ್ಥೆಯು ರಾಜ್ಯದಲ್ಲಿ ಸದ್ಯದಲ್ಲೇ ಪ್ರವಾಸ ಮಾಡಲಿದೆ. ಭೂಗರ್ಭ ಶಾಸ್ತ್ರ ವಿಭಾಗದ ಸಮಗ್ರ ಅಧ್ಯಯನದ ವರದಿಯನ್ನಾಧರಿಸಿ ಗ್ರೀನ್‌ಲ್ಯಾಂಡ್‌ ಕೆಲಸ ಮಾಡಲಿದೆ. ಈ ನಡುವೆ ಕೆಮ್ಮಣ್ಣು ಗುಂಡಿ ಹಾಗೂ ಭದ್ರಾವತಿಯಲ್ಲಿ ಅಲ್ಯುಮಿನಿಯಂ ಅದಿರು, ಬಾಕ್ಸೈಟ್‌ ಇರುವುದೂ ಗೊತ್ತಾಗಿದ್ದು, ಇವುಗಳ ಗಣಿಗಾರಿಕೆಯಿಂದಾಗುವ ಲಾಭ ನಷ್ಟಗಳ ಬಗೆಗೆ ಇನ್ನೂ ಅಧ್ಯಯನ ನಡೆದಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X