ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರಸಾರ ಭಾರತಿಯ ಋಣದಿಂದ ಮುಕ್ತರಾದ ಅಮಿತಾಬ್ ಬಚ್ಚನ್
ನವದೆಹಲಿ : ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ (ಎಬಿಸಿಎಲ್) ಸಂಸ್ಥೆ ಸ್ಥಾಪಿಸಿ, ಭಾರೀ ನಷ್ಟ ಮಾಡಿಕೊಂಡಿದ್ದ ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಈ ಹೊತ್ತು ಮತ್ತೊಂದು ಸಾಲದಿಂದ ಋಣಮುಕ್ತರಾಗಿದ್ದಾರೆ.
ಎಬಿಸಿಎಲ್ ಸಂಸ್ಥೆಯು ಪ್ರಸಾರ ಭಾರತಿಗೆ ನೀಡಬೇಕಾಗಿದ್ದ 2.61 ಕೋಟಿ ರುಪಾಯಿಗಳ ಸಾಲದ ಬಾಕಿಯನ್ನು ಬಚ್ಚನ್ ಗುರುವಾರ ತೀರಿಸಿದ್ದಾರೆ. ಪ್ರಸಾರ ಭಾರತಿಗೆ ನೀಡಬೇಕಿದ್ದ ಸಾಲದ ಕೊನೆಯ ಕಂತಿನ ಚೆಕ್ ಅನ್ನು ನೀಡಿದ ಬಚ್ಚನ್ ಸಾಲ ಮುಕ್ತರಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಪ್ರಸಾರ ಭಾರತಿಗೆ ತಾವು 20.32 ಕೋಟಿ ರುಪಾಯಿ ಅಸಲು ಹಾಗೂ 12.95 ಕೋಟಿ ರುಪಾಯಿ ಬಡ್ಡಿಯನ್ನು ನೀಡಬೇಕಾಗಿತ್ತು. ಈ ಪೈಕಿ ಕೊನೆಯ ಕಂತಾದ 2.61 ಕೋಟಿ ರುಪಾಯಿಗಳನ್ನು ನೀಡಿ ಕೊನೆಗೂ ಋಣಮುಕ್ತರಾಗಿದ್ದಾಗಿ ಬಚ್ಚನ್ ಸುದ್ದಿಗಾರರಿಗೆ ತಿಳಿಸಿದರು. ಎಬಿಸಿಎಲ್ನಿಂದ ಬಚ್ಚನ್ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆಸಿದ್ದರು.
ಮುಖಪುಟ / ಇವತ್ತು... ಈ ಹೊತ್ತು...
Story first published: Friday, February 8, 2002, 5:30 [IST]