ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಫೆ.16ರಂದು ಮುಂಬೈನಲ್ಲಿ ‘ರವಿಬೆಳಗೆರೆಯಾಂದಿಗೆ ಸಾಹಿತ್ಯ ಸಂಜೆ’
ಮುಂಬಯಿ : ಮುಂಬಯಿ ಕನ್ನಡಿಗರ ಸಂಘಟನೆಯಾದ ವೀರಕೇಸರಿ ಕಲಾ ವೃಂದವು ಫೆ.16ರ ಶನಿವಾರ ‘ರವಿ ಬೆಳಗೆರೆಯಾಂದಿಗೆ ಒಂದು ಸಾಹಿತ್ಯ ಸಂಜೆ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಾಹಿತ್ಯ ಅಂಗಳ ಕಾರ್ಯಕ್ರಮವು ಮಾತುಂಗದಲ್ಲಿರುವ ಕರ್ನಾಟಕ ಸಂಘದಲ್ಲಿ ನಡೆಯಲಿದೆ.
ಅಲ್ಲದೆ ಭಾನುವಾರ ಕಲಾ ವೃಂದವು ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ಹಾಗೂ ಲೇಖಕ ರವಿ ಬೆಳಗೆರೆ ಅವರನ್ನು ಸನ್ಮಾನಿಸುತ್ತಿದೆ. ಸಂಘದ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಕಲಾವೃಂದದ ಅಧ್ಯಕ್ಷ ಶಿವಕುಮಾರಶೆಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Wednesday, February 6, 2002, 5:30 [IST]