ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಾವಣಗೆರೆ ಮತ್ತು ಹುಬ್ಬಳ್ಳಿಯ ಪುಟಾಣಿಗಳಿಬ್ಬರಿಗೆ ರಾಷ್ಟ್ರೀಯ ಬಾಲ ಪ್ರಶಸ್ತಿ
ನವದೆಹಲಿ: ಗಣಿತ ಲೋಕದ ಅಚ್ಚರಿ , ಹುಬ್ಬಳ್ಳಿಯ ಸಾಗರ್ ಅಜಿತ್ ಪಾಟೀಲ್ ಹಾಗೂ ಕಂಪ್ಯೂಟರ್ ಕಿಡ್ ದಾವಣಗೆರೆಯ ಅಭಿಜಿತ್, ಕೇಂದ್ರ ಸರಕಾರ ನೀಡುವ ರಾಷ್ಟ್ರೀಯ ಬಾಲ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಶಿಕ್ಷಣ, ಕಲೆ, ಕ್ರೀಡೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಕ್ಕಳನ್ನು ಕೇಂದ್ರವು ಪ್ರತಿವರ್ಷ ರಾಷ್ಟ್ರೀಯ ಬಾಲ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಬಾರಿ ಎರಡು ಪ್ರಶಸ್ತಿಗಳು ರಾಜ್ಯದ ಪಾಲಾಗಿದ್ದು, ಮಂಗಳವಾರ ಉಪರಾಷ್ಟ್ರಪತಿ ಕೃಷ್ಣ ಕಾಂತ್ ಪ್ರಶಸ್ತಿ ಪ್ರದಾನ ಮಾಡಿದರು.
ಅತಿ ಕಷ್ಟವಾದ ಲೆಕ್ಕಗಳನ್ನು ಸುಲಲಿತವಾಗಿ ಬಿಡಿಸಬಲ್ಲ ಹುಬ್ಬಳ್ಳಿಯ ಸಾಗರ್ ಪಾಟೀಲ್ ಹತ್ತು ವರ್ಷದ ಪುಟಾಣಿ. ದಾವಣಗೆರೆಯ ಅಭಿಜಿತ್ 14ರ ಸಣ್ಣ ವಯಸ್ಸಿನಲ್ಲಿಯೇ ತನ್ನ ಸ್ವಂತ ವೆಬ್ ಸೈಟ್ ಒಂದನ್ನು ನಿರ್ಮಿಸಿಕೊಂಡು ಕಂಪ್ಯೂಟರ್ ತಜ್ಞನೆನಿಸಿಕೊಂಡವನು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Wednesday, February 6, 2002, 5:30 [IST]