ತಾಯಿ ಮಗಳ ಕೊಲೆ ನಡೆದ 24 ಗಂಟೆಯಾಳಗೆ ಆರೋಪಿಯ ಬಂಧನ
ಬೆಂಗಳೂರು : ಕಳೆದ ಗುರುವಾರದಂದು ತಾಯಿ- ಮಗಳನ್ನು ಹಾಡುಹಗಲೇ ಕೊಲೆಗೈದು ಪರಾರಿಯಾಗಿದ್ದ ಆರೋಪಿಯಾಬ್ಬನನ್ನು ನಗರದ ಪೊಲೀಸರು ಇಪ್ಪತ್ತನಾಲ್ಕು ತಾಸುಗಳೊಳಗೆ ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ದೀಪಾರಾಂ(30) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊಲೆ ನಡೆದ ದಿನದಂದು ಆರೋಪಿಗಳ ಪತ್ತೆಗಾಗಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಪೀಣ್ಯ ಪೊಲೀಸ್ ಇನ್ಸ್ಪೆಕ್ಟರ್ ಅಬ್ದುಲ್ ಅಜೀಮ್ ನೇತೃತ್ವದ ತಂಡ ಆರೋಪಿ ದೀಪಾರಾಂನನ್ನು ಕುಣಿಗಲ್ನಲ್ಲಿ ಬಂಧಿಸಿದೆ.
ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡು ತಿರುಪತಿಗೆ ತೆರಳಿರುವ ಬಗೆಗೆ ಪೊಲೀಸರಿಗೆ ಸುದ್ದಿ ದೊರೆತಿದ್ದು, ಆತನನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಎಚ್. ಟಿ. ಸಾಂಗ್ಲಿಯಾನಾ ಹೇಳಿದ್ದಾರೆ. ಇತ್ತೀಚೆಗಷ್ಟೆ ಎಂಟು ವರ್ಷದ ದೀಪಿಕಾ ಕೊಲೆ ಪ್ರಕರಣದ ಆರೋಪಿಯನ್ನು ಅಜೀಮ್ ಅವರೇ ಪತ್ತೆ ಹಚ್ಚಿದ್ದರು.
ಅಪರಾಧಗಳ ಬಗ್ಗೆ ಗಮನವಿರಲಿ : ನಗರದಲ್ಲಿನ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಪತ್ರಿಕೆ ಓದಿ ತಿಳಿದುಕೊಂಡು ಎಚ್ಚರಿಕೆಯಿಂದ ಇರಬೇಕು. ಮನೆಯ ಆಳುಕಾಳುಗಳ ಪೂರ್ವಾಪರಗಳನ್ನೂ ತಿಳಿದುಕೊಂಡು ನಂತರ ಅವರನ್ನು ಕೆಲಸಕ್ಕೆ ನೇಮಿಕೊಳ್ಳಬೇಕು. ಅಲ್ಲದೆ ಯಾರನ್ನೂ ಅತಿಯಾಗಿ ನಂಬುವುದು ತರವಲ್ಲ ಎಂದು ಶನಿವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಂಗ್ಲಿಯಾನಾ ಸಾರ್ವಜನಿಕರಿಗೆ ಸಲಹೆ ನೀಡಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಂಗ್ಲಿಯಾನಾ
ವಾಚ್