ಶಿವಮೊಗ್ಗ ಜಿಲ್ಲೆಗೆ ತಲುಪದ ನಾಟಕ ಅಕಾಡೆಮಿ- ನಾಗೇಶ್ ವಿಷಾದ
ಶಿವಮೊಗ್ಗ : ನಾಟಕ ಅಕಾಡೆಮಿಯ ಸದಸ್ಯತ್ವ ನೀಡುವಲ್ಲಿ ಹಲವಾರು ಜಿಲ್ಲೆಗಳಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಇದೇ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ನಾಟಕ ಅಕಾಡೆಮಿ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಾಧ್ಯವಾಗಿಲ್ಲ. ಮುಂದಿನ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಖುದ್ದು ಮುತುವರ್ಜಿ ವಹಿಸುವುದಾಗಿ ನಾಟಕ ಅಕಾಡೆಮಿ ಅಧ್ಯಕ್ಷ ಆರ್.ನಾಗೇಶ್ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ತುಂಬ ಮಂದಿ ಪ್ರತಿಭಾವಂತರು ಇದ್ದಾರೆ. ಆದರೂ ಅಕಾಡೆಮಿ ಪ್ರಶಸ್ತಿ ನೀಡುವುದು ಸಾಧ್ಯವಾಗಿಲ್ಲ. ಪ್ರಾತಿನಿಧ್ಯದ ಕೊರತೆಯೇ ಇದಕ್ಕೆ ಕಾರಣ ಎಂದ ನಾಗೇಶ್ ಈ ವರ್ಷ ಅಕಾಡೆಮಿ ಪ್ರಶಸ್ತಿಯ ಸಂಖ್ಯೆಯನ್ನು 25ಕ್ಕೆ ಸೀಮಿತಗೊಳಿಸಲಾಗಿದೆ. ಪ್ರಶಸ್ತಿಗಳ ಸಂಖ್ಯೆ ಹೆಚ್ಚಾದಂತೆಯೇ ಅದರ ಮೌಲ್ಯ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪಠ್ಯದ ಮಾಹಿತಿ ನಾಟಕ ರೂಪದಲ್ಲಿ : ಪಠ್ಯದಲ್ಲಿರುವ ಮಾಹಿತಿಯನ್ನು ನಾಟಕ ರೂಪಕ್ಕೆ ಅಳವಡಿಸಿ ಅದನ್ನು ಶಿಕ್ಷಣದಲ್ಲಿ ಬಳಸುವ ಬಗ್ಗೆ ಅಕಾಡೆಮಿ ಚಿಂತಿಸುತ್ತಿದೆ. ಶಿಕ್ಷಣಾಧಿಕಾರಿಗಳೊಡನೆ ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ನಾಗೇಶ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...