ಹುಬ್ಬಳ್ಳಿಗೆ ವಾಜಪೇಯಿ ಫೆ.6 ರಂದು ಬರುವುದಿಲ್ಲ - ಸಂಸದ ವಿಜಯ ಸಂಕೇಶ್ವರ
ಹುಬ್ಬಳ್ಳಿ: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಫೆಬ್ರವರಿ 6 ರ ಹುಬ್ಬಳ್ಳಿ ಭೇಟಿ ಮುಂದಕ್ಕೆ ಹೋಗಿದೆ. ಅಲ್ಲಿಗೆ ನೈರುತ್ಯ ವಲಯ ರೈಲ್ವೆ ಕೇಂದ್ರ ಕಚೇರಿ ಸ್ಥಾಪನೆ ಕಾಮಗಾರಿ ಮತ್ತೆ ನೆನೆಗುದಿಗೆ ಬಿದ್ದಿದೆ.
ಫೆ.6 ರ ವಾಜಪೇಯಿ ಅವರ ಹುಬ್ಬಳ್ಳಿ ಭೇಟಿ ಮುಂದಕ್ಕೆ ಹೋಗಿದೆ ಎಂದು ಸಂಸದ ವಿಜಯ ಸಂಕೇಶ್ವರ ತಿಳಿಸಿದ್ದಾರೆ. ಈ ಕುರಿತ ಸುದ್ದಿ ಹೇಳಿಕೆಯಾಂದನ್ನು ಬಿಡುಗಡೆ ಮಾಡಿರುವ ಸಂಕೇಶ್ವರ ಅವರು, ಈ ಕುರಿತು ಪ್ರಧಾನಿ ತಮಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿ ಅವರ ಹುಬ್ಬಳ್ಳಿ ಭೇಟಿಯ ಕುರಿತಾದ ಹೊಸ ದಿನಾಂಕದ ಕುರಿತು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದೂ ವಾಜಪೇಯಿ ತಿಳಿಸಿರುವುದಾಗಿ ಸಂಕೇಶ್ವರ ಹೇಳಿದ್ದಾರೆ.
ಅಂದಹಾಗೆ- ಪ್ರಧಾನಿ ಅವರಿಗೆ ಹುಬ್ಬಳ್ಳಿ ಭೇಟಿಗೆ ಏಕೆ ಬಿಡುವು ಸಿಗುತ್ತಿಲ್ಲ ಅನ್ನುವುದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಾಗರಿಕರಿಗೆ ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ. ಒಂದೆಡೆ ಮುಷರ್ರಫ್, ಇನ್ನೊಂದೆಡೆ ಹಿಂದೂ ಸಂತರ ನಡುವೆ ಹಂಚಿ ಹೋಗಿರುವ ವಾಜಪೇಯಿ ಅವರಿಗೆ ಹುಬ್ಬಳ್ಳಿ ಬಗ್ಗೆ ಯೋಚಿಸಲು ಬಿಡುವೆಲ್ಲಿ ! ಒಟ್ಟಿನಲ್ಲಿ ರೈಲ್ವೆ ಕಚೇರಿಗೆ ಮುಹೂರ್ತ ಕೂಡಿಬಂದಿಲ್ಲ . ಕಂಕಣ ಕೂಡಿ ಬರುವುದು ಯಾವಾಗಲೋ?
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...