ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಆರ್‌.ವಿಶ್ವನಾಥ್‌, ಕಿರ್ಮಾನಿ, ರಾಹುಲ್‌ ದ್ರಾವಿಡ್‌ ಸಾಲಿಗೆ ಅನಿಲ್‌ಕುಂಬ್ಳೆ

By Staff
|
Google Oneindia Kannada News

ಚೆನ್ನೈ: ಇಂಗ್ಲೆಂಡ್‌ ವಿರುದ್ಧದ ಮೂರನೇ ಒಂದು ದಿನದ ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ಪಾಳಯವನ್ನು ಮುನ್ನಡೆಸುವ ಮೂಲಕ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ ನಾಲ್ಕನೇ ಕನ್ನಡಿಗ ಅನ್ನುವ ಅಗ್ಗಳಿಕೆಗೆ ಅನಿಲ್‌ ಕುಂಬ್ಳೆ ಪಾತ್ರರಾದರು.

ಭಾರತ ಕ್ರಿಕೆಟ್‌ ತಂಡದ ಆಪದ್ಬಾಂಧವ ಎಂದೇ ಹೆಸರಾಗಿದ್ದ ಜಿ.ಆರ್‌.ವಿಶ್ವನಾಥ್‌, ಶ್ರೇಷ್ಠ ಗೂಟ ರಕ್ಷಕ ಸಯ್ಯದ್‌ ಕಿರ್ಮಾನಿ ಹಾಗೂ ರಾಹುಲ್‌ ದ್ರಾವಿಡ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಇತರ ಮೂವರು.

ನಾಯಕ ಸೌರವ್‌ ಗಂಗೂಲಿ ಅವರು ಸ್ನಾಯು ಸೆಳೆತದ ಬಾಧೆಗೆ ತುತ್ತಾಗಿರುವುದರಿಂದ ಅನಿಲ್‌ ಕುಂಬ್ಳೆ ಭಾರತೀಯ ತಂಡದ ನೇತೃತ್ವ ವಹಿಸಿದರು. ಭಾರತೀಯ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದಕ್ಕೆ ಕುಂಬ್ಳೆ ಸಂತಸ ವ್ಯಕ್ತಪಡಿಸಿದರೂ, ಗಂಗೂಲಿ ಗಾಯಾಳುವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಪ್ರತಿಯಾಬ್ಬರ ನಿರೀಕ್ಷೆಯನ್ನೂ ಹುಸಿಗೊಳಿಸದಿರಲು ನನ್ನ ಕೈಲಾದ ಮಟ್ಟಿಗೆ ಪ್ರಯತ್ನಿಸುತ್ತೇನೆ. ಉಳಿದುದು ದೇವರಿಗೆ ಬಿಟ್ಟಿದ್ದು ಎಂದು ನಾಯಕನಾಗಿ ಪಂದ್ಯದ ಫಲಿತಾಂಶದ ಕುರಿತು ಕುಂಬ್ಳೆ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X