ಬಲಾಢ್ಯ ಭಾರತ! 700 ಕಿಮೀ ಗುರಿಕಾರ ಅಗ್ನಿ ಕ್ಷಿಪಣಿ ಯಶಸ್ವಿ ಉಡಾವಣೆ
ಬಲಸೋರ್: ಗಣರಾಜ್ಯೋತ್ಸವದ ಮುನ್ನಾದಿನವಾದ ಜ.25 ರ ಶುಕ್ರವಾರ ಭಾರತದ ರಕ್ಷಣಾ ವಿಜ್ಞಾನಿಗಳು ಇನ್ನೊಂದು ಮೈಲಿಗಲ್ಲನ್ನು ಸಾಧಿಸಿದ್ದು, 700 ಕಿಮೀ ಗುರಿಯನ್ನು ಯಶಸ್ವಿಯಾಗಿ ಗಮಿಸಬಲ್ಲ ಅಗ್ನಿ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಭಾರತದ ಕ್ಷಿಪಣಿ ತಂತ್ರಜ್ಞಾನದ ಒಂದಂಗವಾಗಿರುವ ಅಗ್ನಿ ಕ್ಷಿಪಣಿಯ ಉಡಾವಣಾ ಪ್ರಯೋಗವನ್ನು ಒರಿಸ್ಸಾ ಕರಾವಳಿಯ ವೀಲರ್ಸ್ ದ್ವೀಪದಲ್ಲಿ ಶುಕ್ರವಾರ ಬೆಳಗ್ಗೆ 8.50 ರ ಸುಮಾರಿಗೆ ಯಶಸ್ವಿಯಾಗಿ ನಡೆಸಲಾಯಿತು ಎಂದು ಕೇಂದ್ರ ಸರ್ಕಾರದ ವಕ್ತಾರರು ದೆಹಲಿಯಲ್ಲಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯರಾಷ್ಟ್ರಗಳಾದ ಅಮೆರಿಕಾ, ಬ್ರಿಟನ್, ರಷ್ಯಾ, ಚೀನಾ ಹಾಗೂ ಫ್ರಾನ್ಸ್ಗಳಿಗೆ ಮಾತ್ರವಲ್ಲದೆ ಜರ್ಮನಿ, ಜಪಾನ್, ಸ್ಪೇನ್ ರಾಷ್ಟ್ರಗಳ ಗಮನಕ್ಕೂ ಕ್ಷಿಪಣಿ ಉಡಾವಣೆಯ ವಿಷಯವನ್ನು ತರಲಾಗಿದೆ. ಕ್ಷಿಪಣಿ ಉಡಾವಣೆಯ ಹಿಂದೆ ಯಾವುದೇ ರಾಷ್ಟ್ರಕ್ಕೆ ಉತ್ತರ ನೀಡುವ ಪ್ರಯತ್ನ ನಡೆಸಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಅಗ್ನಿ ಕ್ಷಿಪಣಿ ಉಡಾವಣೆಯಲ್ಲಿ ಯಶಸ್ಸು ಗಳಿಸಿರುವ ವಿಜ್ಞಾನಿಗಳನ್ನು ಪ್ರಧಾನಿ ವಾಜಪೇಯಿ ಅಭಿನಂದಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...