ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯದ ಅಧಿಕಾರಿಗಳ ತಂಡದಿಂದ ಫೆಬ್ರವರಿಯಲ್ಲಿ ಅಮೆರಿಕಾ ಪ್ರವಾಸ- ಕೃಷ್ಣ
ಬೆಂಗಳೂರು : 900 ಕೋಟಿ ರುಪಾಯಿ ಅಂದಾಜಿನ ಜಲ ವಸತಿ(ವಾಟರ್ ಷೆಡ್) ಅಭಿವೃದ್ಧಿ ಯೋಜನೆಗೆ ಸಾಲ ಪಡೆಯಲು ರಾಜ್ಯದ ತಂಡವೊಂದು ಬರುವ ತಿಂಗಳು ವಾಷಿಂಗ್ಟನ್ಗೆ ತೆರಳಿ ವಿಶ್ವಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದೆ ಎಂದು ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಶಾಸಕ ಶಿವಾನಂದ ಪಾಟೀಲ್ ಅವರ ಪ್ರಶ್ನೆಗೆ ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸುತ್ತಿದ್ದ ಮುಖ್ಯಮಂತ್ರಿ ಕೃಷ್ಣ , ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಜಲ ವಸತಿ ಯೋಜನೆ ಪ್ರಾರಂಭವಾಗಲಿದೆ ಎಂದು ವಿಧಾನಸಭೆಗೆ ತಿಳಿಸಿದರು.
ಸಂಯುಕ್ತ ಜನತಾದಳದ ಮುಖಂಡ ಸಿ.ಭೈರೇಗೌಡ ಸೇರಿದಂತೆ ವಿವಿಧ ಧುರೀಣರು ವಿಶ್ವಬ್ಯಾಂಕ್ ಸಾಲ ಮಂಜೂರಾತಿ ಎತ್ತಿದ್ದ ಶಂಕೆಗಳನ್ನು ಸ್ಮರಿಸಿದ ಕೃಷ್ಣ , ಸಾಲ ಮಂಜೂರಾಗುವ ಮುನ್ನ ವಿವಿಧ ಹಂತಗಳು ಪೂರ್ಣಗೊಳ್ಳಬೇಕಾಗುತ್ತದೆ ಎಂದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
Comments
Story first published: Tuesday, January 22, 2002, 5:30 [IST]