ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿ ಅಭಿವೃದ್ಧಿಗೆ ಮಂತ್ರಾಲಯ ಮಠದ ಸುಶಮೀಂದ್ರರಿಂದ 2 ಲಕ್ಷ ರು.
ಉಡುಪಿ: ಕನಕ ಪ್ರಿಯ ಶ್ರೀಕೃಷ್ಣನ ಸನ್ನಿಧಿ ಉಡುಪಿ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ 2 ಲಕ್ಷ ರುಪಾಯಿಗಳ ದೇಣಿಗೆಯನ್ನು ಮಂತ್ರಾಲಯ ಮಠದ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದರು ನೀಡಿದ್ದಾರೆ.
ಪೇಜಾವರ ಶ್ರೀಪಾದರು ಶುಕ್ರವಾರ ನಡೆಸಿದ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದ ಸಂದರ್ಭದಲ್ಲಿ ಮಂತ್ರಾಲಯ ಮಠಾಧೀಶರ ಆಪ್ತ ಕಾರ್ಯದರ್ಶಿ ರಾಜಾ ಎಸ್. ಗೋಪಾಲಚಾರ್ಯ ಅವರು ಪೇಜಾವರ ಶ್ರೀಗಳ ಸಾಮಾಜಿಕ ಕಾರ್ಯಕ್ಕೆ 1 ಲಕ್ಷ ರುಪಾಯಿ ಚೆಕ್ಕನ್ನು ನೀಡಿದರು.
ಉಳಿದ ಇನ್ನೊಂದು ಲಕ್ಷ ರುಪಾಯಿಗಳನ್ನು ಉಡುಪಿ ಶ್ರೀಕೃಷ್ಣನಿಗೆ ತೊಡಿಸಲು ಉದ್ದೇಶಿಸಿರುವ ವಜ್ರದ ಕವಚ ನಿರ್ಮಾಣಕ್ಕಾಗಿ ಬಳಸಲು ಸುಶಮೀಂದ್ರರು ಬಯಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Friday, January 18, 2002, 5:30 [IST]