ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರೋನಾಟಿಕಲ್‌ ಪ್ರಶಸ್ತಿಗೆ ಬೆಂಗಳೂರಿನ 7 ವಿಜ್ಞಾನಿಗಳ ಆಯ್ಕೆ

By Staff
|
Google Oneindia Kannada News

ಬೆಂಗಳೂರು : ರಾಷ್ಟ್ರೀಯ ಯೋಜನೆಯಾಂದಕ್ಕಾಗಿ ಕೆಲಸ ಮಾಡುತ್ತಿರುವ ನಗರದ 7 ವಿಜ್ಞಾನಿಗಳನ್ನು ರಾಷ್ಟ್ರೀಯ ಏರೋನಾಟಿಕಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾ (ಎಎಸ್‌ಐ) ಪ್ರಶಸ್ತಿಗಳನ್ನು ನೀಡಲಿದೆ.

ಪ್ರಶಸ್ತಿಯು 50 ಸಾವಿರ ರುಪಾಯಿ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ. ಜನವರಿ 18ರಂದು ಗೋವಾದಲ್ಲಿ ನಡೆಯಲಿರುವ ಎಎಸ್‌ಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಎಎಸ್‌ಐ ಪ್ರಕಟಿಸಿದೆ. ಪ್ರಶಸ್ತಿಗೆ ಆಯ್ಕೆಯಾಗಿರುವ ಬೆಂಗಳೂರಿನ ವಿಜ್ಞಾನಿಗಳು- ಎಸ್‌.ಶ್ರೀನಾಥ್‌ಕುಮಾರ್‌ (ಎನ್‌ಎಎಲ್‌), ಬಿ.ಸುಬ್ಬಾ ರೆಡ್ಡಿ (ಎಚ್‌ಎಎಲ್‌), ಶ್ಯಾಮ್‌ ಶೆಟ್ಟಿ (ಎನ್‌ಎಲ್‌), ಗಿರೀಶ್‌ ಡಿ ಯೋಧರೆ (ಸಿಎಐಆರ್‌), ಸೀತಾರಾಮ ರಾಜು (ಎಡಿಎ), ಎಸ್‌.ರಾಮಶೇಷನ್‌ (ಸಿಇಎಂಐಎಲ್‌ಎಸಿ), ಬಿ.ಬಿ.ಮಿಶ್ರ (ನಿವೃತ್ತ- ಎಡಿಎ) .

ಎಡಿಎಯ ಕೆ.ಕರುಣಾಕರ್‌ ಅವರನ್ನು ಡಾ.ಬೈರನ್‌ ರಾಯ್‌ ಪ್ರತಿಷ್ಠಾನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರಿಗೆ 10 ಸಾವಿರ ರುಪಾಯಿ ನಗದು ಮತ್ತು ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುವುದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X