ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಆರ್ಇಸಿ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀಕಂಠಯ್ಯಅವರಿಗೆ ಎಬಿಐ ಮನ್ನಣೆ
ಸುರತ್ಕಲ್: ಇಲ್ಲಿನ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜಿ (ಕೆಆರ್ಇಸಿ)ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಚ್. ಆರ್. ಶ್ರೀಕಂಠಯ್ಯ ಅವರಿಗೆ ಅಮೆರಿಕನ್ ಬಯಾಗ್ರಫಿಕಲ್ ಸಂಸ್ಥೆಯ (ಎಬಿಐ) ಪ್ರತಿಷ್ಠಿತ ಪುರಸ್ಕಾರ ದೊರೆತಿದೆ.
ಶ್ರೀಕಂಠಯ್ಯನವರ ಸೇವಾ ದಕ್ಷತೆಯನ್ನು ಶ್ಲಾಘಿಸಿರುವ ಎಬಿಐ, ತನ್ನ ಇಂಟರ್ನ್ಯಾಶನಲ್ ಲೀಡರ್ಶಿಪ್ ವಿಶೇಷ ಪ್ರಶಸ್ತಿ ಗೆ ಶ್ರೀಕಂಠಯ್ಯ ಅವರು ಆಯ್ಕೆಯಾಗಿರುವುದಾಗಿ ಪ್ರಕಟಿಸಿದೆ.
ಕೆ. ಆರ್. ಇ. ಸಿ. ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಾಧನೆಗೆ ಸಂದ ಪುರಸ್ಕಾರ ಇದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪಿ.ಎನ್. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವೃಂದ ಡಾ. ಶ್ರೀಕಂಠಯ್ಯ ಅವರನ್ನು ಅಭಿನಂದಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, January 16, 2002, 5:30 [IST]